alex Certify SHOCKING: ಕೈಕಾಲು ತೊಳೆಯಲು ಕಾಳಿ ನದಿಯಲ್ಲಿ ಕೈಹಾಕುತ್ತಿದ್ದಂತೆ ಎಳೆದೊಯ್ದ ಮೊಸಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಕೈಕಾಲು ತೊಳೆಯಲು ಕಾಳಿ ನದಿಯಲ್ಲಿ ಕೈಹಾಕುತ್ತಿದ್ದಂತೆ ಎಳೆದೊಯ್ದ ಮೊಸಳೆ

ಕಾರವಾರ: ಕಾಳಿ ನದಿಯಲ್ಲಿ ಮೊಸಳೆಯೊಂದು ಯುವಕನನ್ನು ಎಳೆದೊಯ್ದ ಘಟನೆ ಉತ್ತರ ಕನ್ನಡ ಜಿಲ್ಲೆ ದಾಂಡೇಲಿ ಹೊರವಲಯದಲ್ಲಿ ನಡೆದಿದೆ.

ಅರ್ಷದ್ ಖಾನ್ ರಾಯಚೂರ(23) ಎಂಬ ಯುವಕನನ್ನು ಮೊಸಳೆ ಎಳೆದುಕೊಂಡು ಹೋಗಿದೆ. ಕೆಲಸ ಮುಗಿದ ನಂತರ ಕಾಳಿನದಿಯಲ್ಲಿ ಕೈಕಾಲು ತೊಳೆಯಲು ಹೋಗಿದ್ದಾಗ ಮೊಸಳೆ ಎಳೆದುಕೊಂಡು ಹೋಗಿದೆ.

ನದಿಯಲ್ಲಿ ನೀರಿಗೆ ಕೈ ಹಾಕುತ್ತಿದ್ದಂತೆ ಅರ್ಷದ್ ಖಾನ್ ರಾಯಚೂರ ಅವರನ್ನು ಮೊಸಳೆ ಎಳೆದುಕೊಂಡು ಹೋಗಿದ್ದು, ಆತನ ಸ್ನೇಹಿತ ನೀಡಿದ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಪರಿಶೀಲನೆ ನಡೆಸಿ ಹುಡುಕಾಟ ನಡೆಸಿದ್ದಾರೆ. ದಾಂಡೇಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...