alex Certify ಪುತ್ತುಪ್ಪಲ್ಲಿ ಉಪಚುನಾವಣೆ: ತಂದೆಯ ಚುನಾವಣಾ ದಾಖಲೆ ಮುರಿದ ಚಾಂಡಿ ಉಮ್ಮನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುತ್ತುಪ್ಪಲ್ಲಿ ಉಪಚುನಾವಣೆ: ತಂದೆಯ ಚುನಾವಣಾ ದಾಖಲೆ ಮುರಿದ ಚಾಂಡಿ ಉಮ್ಮನ್

ಕೇರಳದ ಪುತ್ತುಪ್ಪಲ್ಲಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ದಾಖಲಿಸಿದೆ. ಈ ಸ್ಥಾನವನ್ನು ಕಾಂಗ್ರೆಸ್ ನಾಯಕ ಮತ್ತು ಕೇರಳದ ಮಾಜಿ ಮುಖ್ಯಮಂತ್ರಿ ಉಮೆನ್ ಚಾಂಡಿ ಅವರ ಪುತ್ರ ಚಾಂಡಿ ಉಮ್ಮನ್ ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕ್ಸ್‌ ವಾದಿ) ಅಭ್ಯರ್ಥಿ ಜೈಕ್ ಸಿ ಥಾಮಸ್ ಅವರನ್ನು ಸೋಲಿಸುವ ಮೂಲಕ ಉಳಿಸಿಕೊಂಡರು.

ಈ ಗೆಲುವಿಗೆ ಅಭಿನಂದನೆ ಸಲ್ಲಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಮುಖ್ಯಮಂತ್ರಿಯವರ ದುರಹಂಕಾರದ ವಿರುದ್ಧ ಪುತ್ತುಪ್ಪಳ್ಳಿ ಜನತೆ ತೀರ್ಪು ನೀಡಿದ್ದಾರೆ. ಪುದುಪಲ್ಲಿಯಲ್ಲಿನ ಗೆಲುವು ಕಾಂಗ್ರೆಸ್ ಒಗ್ಗಟ್ಟಿನ ಗೆಲುವು ಎಂದು ಹೇಳಿದ್ದಾರೆ.

ಫಲಿತಾಂಶ ಪ್ರಕಟವಾದ ಬೆನ್ನಲ್ಲೇ, ನನ್ನ ತಂದೆಯಂತೆಯೇ ನನ್ನ ರಾಜಕೀಯವೂ ಜನಪರವಾಗಿರುತ್ತದೆ, ನಾನು ನನ್ನ ತಂದೆಯ ಕೆಲಸವನ್ನು ನೋಡಿದ್ದೇನೆ ಮತ್ತು ನಾನು ಆ ದಾರಿಯಲ್ಲಿ ಹೋಗಲು ಬಯಸುತ್ತೇನೆ, ನನ್ನ ತಂದೆಯಂತೆಯೇ ನಾನು ಮುಂದುವರಿಯುತ್ತೇನೆ ಎಂದು ಚಾಂಡಿ ಉಮ್ಮನ್ ಹೇಳಿದ್ದಾರೆ.

ಕೇರಳದ ಪುತ್ತುಪಲ್ಲಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಚಾಂಡಿ ಉಮ್ಮನ್ ಅವರು ಸಿಪಿಐ(ಎಂ) ಅಭ್ಯರ್ಥಿ ಜೈಕ್ ಥಾಮಸ್ ಅವರನ್ನು 37,000 ಮತಗಳಿಂದ ಸೋಲಿಸಿದರು. ಚಾಂಡಿ 78,649 ಮತಗಳನ್ನು ಪಡೆದರೆ, ಕಮ್ಯುನಿಸ್ಟ್ ಪಕ್ಷದ ಜೈಕ್ 41,982 ಮತಗಳನ್ನು ಪಡೆದರು. ಮೂರನೇ ಸ್ಥಾನವನ್ನು ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ 6,846 ಮತಗಳನ್ನು ಪಡೆದರು.

ಚಾಂಡಿ ಉಮ್ಮನ್ ಅವರು ಕ್ಷೇತ್ರದಲ್ಲಿ ತಮ್ಮ ತಂದೆಯ 33,255 ಮತಗಳ ದಾಖಲೆಯನ್ನು ಮೀರಿಸಬಲ್ಲರು ಎಂಬುದು ಮತದಾನದ ಅತ್ಯಂತ ಚರ್ಚೆಯ ಅಂಶಗಳಲ್ಲಿ ಒಂದಾಗಿತ್ತು. ಅವರ ತಂದೆ ಐದು ದಶಕಗಳಿಗೂ ಹೆಚ್ಚು ಕಾಲ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಉಮ್ಮನ್ ಚಾಂಡಿ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಸೆಪ್ಟೆಂಬರ್ 5 ರಂದು ಚುನಾವಣೆ ನಡೆದಿತ್ತು.

ಚಾಂಡಿ ಉಮೆನ್ ಮಾರ್ಚ್ 1986 ರಲ್ಲಿ ಪುತ್ತುಪಲ್ಲಿಯಲ್ಲಿ ಜನಿಸಿದರು. ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದರು. ಅವರು ತಮ್ಮ ಎಲ್‌ಎಲ್‌ಬಿಯನ್ನು ದೆಹಲಿ ವಿಶ್ವವಿದ್ಯಾಲಯದಿಂದ ಮತ್ತು ಎಲ್‌ಎಲ್‌ಎಂ ಅನ್ನು ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿದರು.

ಚಾಂಡಿ ಅವರು ವಕೀಲರಾಗಿದ್ದು, ದೆಹಲಿಯ ಅಮಿಟಿ ವಿಶ್ವವಿದ್ಯಾಲಯ ಮತ್ತು ವಿವೇಕಾನಂದ ಇನ್‌ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಸ್ಟಡೀಸ್‌ನಲ್ಲಿ ಸಹಾಯಕ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅವರು ಪ್ರಸ್ತುತ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಭಾವ ಕೋಶದ ಅಧ್ಯಕ್ಷರಾಗಿದ್ದಾರೆ ಮತ್ತು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಸದಸ್ಯರಾಗಿದ್ದಾರೆ. 2013ರಲ್ಲಿ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿಯಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...