alex Certify ಧಾನ್ಯಗಳಿಗೆ ಹುಳ ಹಿಡಿಯದಿರಲು ಇವುಗಳನ್ನು ಮಿಕ್ಸ್ ಮಾಡಿ ಸಂಗ್ರಹಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧಾನ್ಯಗಳಿಗೆ ಹುಳ ಹಿಡಿಯದಿರಲು ಇವುಗಳನ್ನು ಮಿಕ್ಸ್ ಮಾಡಿ ಸಂಗ್ರಹಿಸಿ

ಆಹಾರ ಪದಾರ್ಥಗಳು ತೇವಾಂಶಗೊಂಡಾಗ ಅವು ಬಹಳ ಬೇಗನೆ ಹಾಳಾಗುತ್ತದೆ. ಹುಳು ಹಿಡಿಯುತ್ತದೆ. ಇದನ್ನು ಬಳಸಲು, ಸ್ವಚ್ಛಗೊಳಿಲು ಆಗುವುದಿಲ್ಲ. ಹಾಗಾಗಿ ಈ ರೀತಿ ಹುಳ ಹಿಡಿಯಬಾರದಂತಿದ್ದರೆ ಈ ನಿಯಮ ಪಾಲಿಸಿ.

*ಧಾನ್ಯಗಳನ್ನು ಸಂಗ್ರಹಿಸುವಾಗ ಅದರ ಜೊತೆ ಬೇವಿನ ಎಲೆಗಳನ್ನು ಹಾಕಿಡಿ. ಬೇವು ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಕೀಟಗಳು ಬೆಳೆಯುವುದಿಲ್ಲ. ಬಂದರೂ ಎಲೆಗಳ ಸೇವನೆಯಿಂದ ಸಾಯುತ್ತವೆ.

*ಧಾನ್ಯಗಳು, ಹಿಟ್ಟಿಗೆ ಹುಳ ಹಿಡಿಯಬಾರದಂತಿದ್ದರೆ ಅದರಲ್ಲಿ ಕೆಂಪು ಮೆಣಸಿನಕಾಯಿಯನ್ನು ಹಾಕಿಡಿ. ಇದು ಖಾರವಾಗಿರುವುದಿಂದ ಇದರ ಸೇವನೆಗೆ ಅವುಗಳು ಸಾಯುತ್ತದೆ.

*ರವೆಗೆ ಹುಳ ಬರಬಾರದಂತಿದ್ದರೆ ಅದಕ್ಕೆ ಲವಂಗ ಹಾಕಿಡಿ. ಇಲ್ಲವಾದರೆ ರವಾವನ್ನು ಹುರಿದು ಇಡಿ. ಇದರಿಂದ ಹುಳ ಹಿಡಿಯುವುದಿಲ್ಲ.

*ಧಾನ್ಯಗಳು ಹಾಗೂ ಹಿಟ್ಟಿಗೆ ಅರಶಿನ ಮತ್ತು ಕರಿಬೇವು ಮಿಕ್ಸ್ ಮಾಡಿದರೂ ಕೂಡ ಅದು ಹುಳ ಹಿಡಿಯದಂತೆ ತಡೆಯುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...