alex Certify ಅಪರೂಪಕ್ಕೆ ಲಾಟರಿ ಖರೀದಿಸಿದ್ದ ಕಾರ್ಮಿಕನಿಗೆ ಒಲಿಯಿತು ಅದೃಷ್ಟ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪರೂಪಕ್ಕೆ ಲಾಟರಿ ಖರೀದಿಸಿದ್ದ ಕಾರ್ಮಿಕನಿಗೆ ಒಲಿಯಿತು ಅದೃಷ್ಟ !

ದೈವಸ್ಥಾನಕ್ಕೆ ಭೇಟಿ ನೀಡಿದ್ದ ಕಾರ್ಮಿಕರೊಬ್ಬರು ಲಾಟರಿ ಟಿಕೆಟ್ ಖರೀದಿಸಿದ್ದು, ಈ ಟಿಕೆಟ್ ಗೆ ಈಗ 50 ಲಕ್ಷ ರೂಪಾಯಿ ಬಹುಮಾನ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿ ಸಮೀಪದ ಇಳಂತಿಲ ಗ್ರಾಮದ ಎನ್ಮಾಡಿಯ ಚಂದ್ರಯ್ಯ ಕುಂಬಾರ ಈ ಅದೃಷ್ಟಶಾಲಿಯಾಗಿದ್ದಾರೆ.

ಈ ಮೊದಲು ಕಾರ್ಮಿಕನಾಗಿ ಈಗ ಮೇಸ್ತ್ರಿಯಾಗಿ ಕಾರ್ಯನಿರ್ವಹಿಸುತ್ತಿರುವ ಚಂದ್ರಯ್ಯ ಅವರು ಕಾನತ್ತೂರು ದೈವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ಅಲ್ಲಿನ ಬೊಲ್ಬು ಲಾಟರಿ ಏಜೆನ್ಸಿಯಿಂದ ಕೇರಳ ರಾಜ್ಯದ ಓಣಂ ಬಂಪರ್ ಲಾಟರಿ ಟಿಕೆಟ್ ಅನ್ನು 500 ರೂಪಾಯಿ ಪಾವತಿಸಿ ಖರೀದಿಸಿದ್ದರು.

ಇದರ ಬಂಪರ್ ಬಹುಮಾನ 25 ಕೋಟಿ ರೂಪಾಯಿಗಳಾಗಿದ್ದು, ಚಂದ್ರಯ್ಯ ಅವರಿಗೆ ಮೂರನೇ ಬಹುಮಾನ 50 ಲಕ್ಷ ರೂಪಾಯಿ ಬಂದಿದೆ. ಚಂದ್ರಯ್ಯ ಅವರಿಗೆ ಲಾಟರಿ ಟಿಕೆಟ್ ಖರೀದಿಸುವ ಚಟವಿಲ್ಲದಿದ್ದರೂ ಸಹ ಅಪರೂಪಕ್ಕೆ ಖರೀದಿಸಿದ ಈ ಲಾಟರಿ ಟಿಕೆಟ್ ಗೆ ಅದೃಷ್ಟ ಒಲಿದು ಬಂದಿದೆ. ಈ ಹಣದಲ್ಲಿ ಸಾಲ ತೀರಿಸಿ, ಮಕ್ಕಳ ಮದುವೆ ಹಾಗೂ ಶಿಕ್ಷಣಕ್ಕೆ ವೆಚ್ಚ ಮಾಡುವುದಾಗಿ ಚಂದ್ರಯ್ಯ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...