ಶಿವಮೊಗ್ಗ: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯ ಶಿವಮೊಗ್ಗ ಹಾಲು ಒಕ್ಕೂಟ ವತಿಯಿಂದ ರೈತರಿಂದ ಖರೀದಿಸುವ ಹಾಲಿನ ದರವನ್ನು 2 ರೂಪಾಯಿ ಕಡಿತ ಮಾಡಲಾಗಿದೆ.
ಸೋಮವಾರದಿಂದಲೇ ದರ ಕಡಿತ ಜಾರಿಗೆ ಬಂದಿದ್ದು, ಗ್ರಾಹಕರು ಖರೀದಿಸುವ ಹಾಲಿನ ದರದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಮದುವೆ, ಶುಭ ಸಮಾರಂಭಗಳಿಗೆ ನಿರ್ಬಂಧವಿದ್ದು, ಶಾಲೆಗಳಿಗೆ ರಜೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಹಾಲಿನ ಮಾರಾಟ ಕುಸಿತವಾಗಿರುವುದರಿಂದ 2 ರೂಪಾಯಿ ದರ ಕಡಿತ ಮಾಡಲಾಗಿದೆ ಎಂದು ಹೇಳಲಾಗಿದೆ.
ಹಾಲು ಮಾರಾಟ ಉತ್ತಮವಾಗಿದ್ದ ಸಂದರ್ಭದಲ್ಲಿ ರೈತರಿಂದ ಖರೀದಿಸುವ ಹಾಲಿನ ದರವನ್ನು ಶಿವಮೊಗ್ಗ ಹಾಲು ಒಕ್ಕೂಟ 4 ಬಾರಿ ಹೆಚ್ಚಳ ಮಾಡಿದೆ. ಒಂದೇ ವರ್ಷದಲ್ಲಿ ಲೀಟರ್ ಗೆ 7.70 ರೂ. ಹೆಚ್ಚಳ ಮಾಡಿ ಬೇರೆ ಯಾವುದೇ ಹಾಲು ಒಕ್ಕೂಟಗಳು ನೀಡದಷ್ಟು ದರವನ್ನು ರೈತರಿಂದ ಖರೀದಿಸುವ ಹಾಲಿನ ಶಿವಮೊಗ್ಗ ಹಾಲು ಒಕ್ಕೂಟ ನೀಡುತ್ತಿತ್ತು.
ಈಗ ಹಾಲು ಮಾರಾಟ ಕುಸಿತವಾಗಿದೆ. ಸಂಗ್ರಹ ಮತ್ತು ಮಾರಾಟದ ವ್ಯತ್ಯಾಸವನ್ನು ಸರಿದೂಗಿಸುವ ಉದ್ದೇಶದಿಂದ ರೈತರಿಂದ ಖರೀದಿಸುವ ಹಾಲಿನ ದರವನ್ನು 2 ರೂಪಾಯಿ ಕಡಿತ ಮಾಡಲಾಗಿದೆ ಎಂದು ಹೇಳಲಾಗಿದೆ.