alex Certify BIG NEWS: RSS ಮಾಹಿತಿಯನ್ನು SDPI ಕಾರ್ಯಕರ್ತರಿಗೆ ಸೋರಿಕೆ ಮಾಡಿದ್ದ ಪೊಲೀಸ್​ ಅಧಿಕಾರಿ ಸಸ್ಪೆಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: RSS ಮಾಹಿತಿಯನ್ನು SDPI ಕಾರ್ಯಕರ್ತರಿಗೆ ಸೋರಿಕೆ ಮಾಡಿದ್ದ ಪೊಲೀಸ್​ ಅಧಿಕಾರಿ ಸಸ್ಪೆಂಡ್

ಎಸ್​ಡಿಪಿಐ ಕಾರ್ಯಕರ್ತರಿಗೆ ಆರ್​ಎಸ್​ಎಸ್​ ಕಾರ್ಯಕರ್ತರ ಖಾಸಗಿ ಮಾಹಿತಿಗಳನ್ನು ಸೋರಿಕೆ ಮಾಡಿದ್ದ ಕೇರಳದ ಪೊಲೀಸ್​ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.‌

ಕರಿಮನ್ನೂರು ಪೊಲೀಸ್​ ಠಾಣೆಯ ಸಿಪಿಓ ಪಿಕೆ ಅನಸ್​ರನ್ನು ಆಂತರಿಕ ತನಿಖೆಗೆ ಒಳಪಡಿಸಿದ ಪೊಲೀಸರು ಪ್ರೈವೇಟ್​ ಚಾಟ್​ ಗ್ರೂಪ್​ಗಳಿಗೆ ಪೊಲೀಸ್​ ಡೇಟಾ ಬೇಸ್​ನಲ್ಲಿದ್ದ ಮಾಹಿತಿಗಳನ್ನು ಸೋರಿಕೆ ಮಾಡಿರೋದು ಸಾಬೀತಾದ ಹಿನ್ನೆಲೆಯಲ್ಲಿ ಅನಸ್​​ರನ್ನು ಅಮಾನತುಗೊಳಿಸಲಾಗಿದೆ.

ಸಿಪಿಓ ಅನಸ್​​ರನ್ನು ಇಡುಕ್ಕಿ ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ಇದು ದೀರ್ಘ ತನಿಖೆಯ ಬಳಿಕ ಅಮಾನತುಗೊಳಿಸಿ ಆದೇಶ ನೀಡಲಾಗಿದೆ.

ಇಡುಕ್ಕಿ ಜಿಲ್ಲೆಯ ತೊಡುಪುಳದಲ್ಲಿ ಮಧುಸೂಧನ್ ಎಂಬ ಬಸ್ ಕಂಡಕ್ಟರ್ ಮೇಲೆ 6 ಮಂದಿ ಹಲ್ಲೆ ನಡೆಸಿದ ಪ್ರಕರಣದಲ್ಲಿ SDPI ಕಾರ್ಯಕರ್ತರನ್ನು ಡಿಸೆಂಬರ್ 2 ರಂದು ಬಂಧಿಸಲಾಗಿತ್ತು. ಫೇಸ್​ಬುಕ್​​ನಲ್ಲಿ ಕೋಮುವಾದವನ್ನು ಪ್ರಚೋದಿಸುವಂತಹ ಪೋಸ್ಟ್​ ಶೇರ್​ ಮಾಡಿದ್ದಾರೆ ಎಂದು ಆರೋಪಿಸಿ ಬಸ್​ ಕಂಡಕ್ಟರ್​ ಮೇಲೆ ಹಲ್ಲೆ ನಡೆಸಲಾಗಿತ್ತು.

ಈ ನಡುವೆ, ಪಾಲಕ್ಕಾಡ್ ಜಿಲ್ಲೆಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತನ ಹತ್ಯೆಯ ತನಿಖೆ ನಡೆಸುತ್ತಿರುವ ಕೇರಳ ಪೊಲೀಸರು ಪ್ರಕರಣ ಸಂಬಂಧ ಚೆರ್ಪುಳಸ್ಸೆರಿ ಪ್ರದೇಶದ ಎಸ್‌ಡಿಪಿಐ ಕಾರ್ಯಕರ್ತನನ್ನು ಇಂದು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿ ಕೊಲೆಯ ಪ್ರಮುಖ ಆರೋಪಿಯಾಗಿದ್ದಾನೆ. ಆತ ಆರ್​ಎಸ್​ಎಸ್​ ಕಾರ್ಯಕರ್ತನನ್ನು ಕತ್ತಿಯಿಂದ ಇರಿದಿದ್ದಾನೆ. ಬಂಧಿತ ಆರೋಪಿ ಒಬ್ಬ ಎಸ್​ಡಿಪಿಐ ಕಾರ್ಯಕರ್ತನಾಗಿದ್ದಾನೆ ಎಂದು ಎಸ್ಪಿ ಆರ್​. ವಿಶ್ವನಾಥ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...