alex Certify ಮರೆಯದೆ ತಿನ್ನಿ ಕ್ಯಾಲ್ಸಿಯಂ, ಕಬ್ಬಿಣಾಂಶ ಸಾಕಷ್ಟಿರುವ ಚಿಕ್ಕಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರೆಯದೆ ತಿನ್ನಿ ಕ್ಯಾಲ್ಸಿಯಂ, ಕಬ್ಬಿಣಾಂಶ ಸಾಕಷ್ಟಿರುವ ಚಿಕ್ಕಿ….!

ಸಾಲು ಸಾಲು ಹಬ್ಬಗಳು ಆರಂಭವಾಗಿ ಬಿಟ್ಟವು. ಕೊರೊನಾ ಕಾರಣಕ್ಕೆ ಕಂಗೆಟ್ಟಿದ್ದ ಪ್ರತಿಯೊಬ್ಬರೂ ಈಗ ಹಬ್ಬದ ಸಡಗರದಲ್ಲಿ ಮೈಮರೆಯುತ್ತಿದ್ದಾರೆ. ಮಳೆಗಾಲದಲ್ಲಿ ಅಥವಾ ಹಬ್ಬದ ಸಮಯದಲ್ಲಿ ತಿನ್ನಲೇ ಬೇಕಾದ ವಸ್ತುಗಳಲ್ಲಿ ಬೆಲ್ಲ ಮತ್ತು ಕಡಲೆ ಬೀಜವೂ ಒಂದು. ಏನಿದರ ಮಹತ್ವ…?

ಕಡಲೆ ಬೀಜ ಅಥವಾ ನೆಲಕಡಲೆಯಲ್ಲಿ ಬಾದಾಮಿಯಷ್ಟೇ ಪೋಷಕಾಂಶಗಳಿವೆ. ಬಾದಾಮಿ ಬಲು ದುಬಾರಿ ಆದ್ದರಿಂದ ಎಲ್ಲರಿಗೂ ಅದನ್ನು ಕೊಳ್ಳಲು ಸಾಧ್ಯವಿಲ್ಲವಾದ್ದರಿಂದ ನೆಲಕಡಲೆ ಅದಕ್ಕೆ ಅತ್ಯುತ್ತಮ ಪರ್ಯಾಯ. ಇದರಲ್ಲಿ ಪ್ರೊಟೀನ್, ಪೋಲಿಕ್ ಆಸಿಡ್ ಮತ್ತಿತರ ಅಂಶಗಳಿದ್ದು, ದೇಹಕ್ಕೆ ಗ್ಲುಕೋಸ್ ನೀಡುತ್ತದೆ. ಕಬ್ಬಿಣಾಂಶ ಕಡಿಮೆ ಇರುವವರು ಕಡ್ಡಾಯವಾಗಿ ಕಡಲೆ ಬೀಜ ಸೇವಿಸಬೇಕು.

ಬೆಲ್ಲದಿಂದ ದೇಹಕ್ಕೆ ಕೇವಲ ಸಿಹಿ ಮಾತ್ರವಲ್ಲ ಇದರಲ್ಲೂ ಕ್ಯಾಲ್ಸಿಯಂ, ಕಬ್ಬಿಣಾಂಶ ಸಾಕಷ್ಟಿದೆ. ಮುಖ್ಯವಾಗಿ ಮುಟ್ಟಿನ ಸಮಯದಲ್ಲಿ ಎದುರಾಗುವ ಅನಾರೋಗ್ಯ ಸಮಸ್ಯೆಗಳಿಗೆ ಬೆಲ್ಲ ಅತ್ಯುತ್ತಮ ಪರಿಹಾರ ನೀಡುತ್ತದೆ. ದೇಹದಲ್ಲಿ ರಕ್ತ ಸಂಚಾರವನ್ನು ಸರಿಯಾಗಿ ನಿರ್ವಹಿಸಲು ಕಡ್ಲೆ ಹಾಗೂ ಬೆಲ್ಲ ಬಹುಮುಖ್ಯ. ಜೀರ್ಣಕ್ರಿಯೆ ಬಳಿಕ ಉಳಿಯುವ ವಿಷಕಾರಿ ಅಂಶಗಳನ್ನು ಇದು ದೇಹದಿಂದ ಹೊರಹಾಕುತ್ತದೆ. ಇದರಿಂದ ತ್ವಚೆಯ ಸೌಂದರ್ಯವೂ ಹೆಚ್ಚುತ್ತದೆ ಎಂಬುದು ಅಸಕ್ತ ಸಂಗತಿ.

ಮಕ್ಕಳು ಇದನ್ನು ತಿನ್ನುವುದರಿಂದ ಅವರ ಹಲ್ಲು ಹಾಗೂ ಮೂಳೆ ಗಟ್ಟಿಯಾಗುತ್ತದೆ. ಇಂದಿಗೂ ಮಳಿಗೆಗಳಲ್ಲಿ ಸಿಗುವ ಚಿಕ್ಕಿ ಅಥವಾ ಕಡ್ಲೆ ಬೆಲ್ಲ ಮಿಶ್ರಣದ ಸಿಹಿ ತಿಂಡಿಗೆ ಹೆಚ್ಚಿನ ಬೇಡಿಕೆ ಇದೆ. ಮನೆಯಲ್ಲಿ ಇದನ್ನು ತಯಾರಿಸುವುದು ಕಷ್ಟವಾದರೆ ಹೊರಗಿನಿಂದ ತಂದಾದರೂ ತಿನ್ನಿ ಹಾಗೂ ಮಕ್ಕಳಿಗೆ ತಿನ್ನಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...