alex Certify ‘ರಾಬರ್ಟ್’ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮಂಗಳಮುಖಿ ಮಂಜಮ್ಮ ಜೋಗತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ರಾಬರ್ಟ್’ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮಂಗಳಮುಖಿ ಮಂಜಮ್ಮ ಜೋಗತಿ

ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಸಿನಿಮಾಗೆ  ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳು ದೊರೆಯುತ್ತಲೇ ಇವೆ. ತರುಣ್ ಸುಧೀರ್ ನಿರ್ದೇಶನಕ್ಕೆ ದರ್ಶನ್ ಅಭಿಮಾನಿಗಳು ಫಿದಾ ಆಗಿದ್ದಾರೆ. ರಾಬರ್ಟ್ ಚಿತ್ರತಂಡ ಇದೇ ತಿಂಗಳು ಮಾರ್ಚ್ 29ರಿಂದ ಏಪ್ರಿಲ್ 1 ರವರೆಗೆ ವಿಜಯಯಾತ್ರೆಯನ್ನು ಮಾಡಲಿದೆ.

ಆಮೀರ್​ ಖಾನ್​ ಬಳಿಕ ಕೊರೊನಾ ಸೋಂಕಿಗೆ ಒಳಗಾದ ಮತ್ತೊಬ್ಬ 3 ಈಡಿಯಟ್ಸ್​ ನಟ….!

ಈ ಚಿತ್ರದಲ್ಲಿ ಶಿವರಾಜ್ ಕೆ ಆರ್ ಪೇಟೆ ಬಾಬಿ ಎಂಬ ಮಂಗಳಮುಖಿ ಪಾತ್ರದಲ್ಲಿ ನಟಿಸಿದ್ದಾರೆ ಈ ಸಿನಿಮಾದಲ್ಲಿ ಮಂಗಳಮುಖಿಯರ ಪರವಾಗಿ ದರ್ಶನ್  ಒಳ್ಳೆಯ ಡೈಲಾಗ್ ಹೊಡೆಯುತ್ತಾರೆ ಇದು ಕೂಡ ಸಿನಿ ಪ್ರೇಕ್ಷಕರ ಗಮನ ಸೆಳೆಯುವಂತೆ ಮಾಡಿದೆ. ಪದ್ಮಶ್ರೀ ಪುರಸ್ಕೃತ ಮಂಗಳಮುಖಿ ಮಂಜಮ್ಮ ಜೋಗತಿ ಮಂತ್ರಿ ಮಾಲ್ ನಲ್ಲಿ ರಾಬರ್ಟ್ ಚಿತ್ರವನ್ನು ವೀಕ್ಷಿಸಿದ್ದು ಚಿತ್ರದ ಕುರಿತು ಮಾತನಾಡಿದ್ದಾರೆ. ಸಿನಿಮಾ ಆರಂಭದಲ್ಲಿ ಅಯೋಧ್ಯೆಯನ್ನು ನೋಡಿದಷ್ಟೇ ಸಂತೋಷವಾಯಿತು ದರ್ಶನ್ ಅವರು ತುಂಬಾ ಅದ್ಬುತವಾಗಿ ನಟನೆ ಮಾಡಿದ್ದಾರೆ ಹಾಗೂ ನಮ್ಮ ಸಮುದಾಯಕ್ಕೆ ಗೌರವ ಕೊಡುವ ಮಾತುಗಳನ್ನಾಡಿದ್ದಾರೆ ಎಂದು ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...