alex Certify ಟೀಂ ಇಂಡಿಯಾ ಆಟಗಾರರನ್ನ ಭೇಟಿಯಾಗುವ ಕನಸು ಕಂಡಿದ್ದ ಅಭಿಮಾನಿಗಳಿಗೆ ಕಾದಿತ್ತು ಶಾಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೀಂ ಇಂಡಿಯಾ ಆಟಗಾರರನ್ನ ಭೇಟಿಯಾಗುವ ಕನಸು ಕಂಡಿದ್ದ ಅಭಿಮಾನಿಗಳಿಗೆ ಕಾದಿತ್ತು ಶಾಕ್​..!

ಟೀಂ ಇಂಡಿಯಾ ತಂಡದ ಆಟಗಾರರನ್ನ ಭೇಟಿಯಾಗಿ ಮಾತನಾಡಿ ಎಂಬ ಶೀರ್ಷಿಕೆಯನ್ನ ಹೊಂದಿದ್ದ ಟಿಕೆಟ್​ಗಳು ಇಂಡಿಯಾ – ಆಸ್ಟ್ರೇಲಿಯಾ ಏಕದಿನ ಹಾಗೂ ಟಿ 20 ಸಿರೀಸ್​ ವೇಳೆ ಸ್ಟೇಡಿಯಂ ತುಂಬೆಲ್ಲ ಕಂಡು ಬಂದಿದ್ದವು.

ಬರೋಬ್ಬರಿ 31,083 ರೂಪಾಯಿಗೆ ಅತ್ಯುತ್ತಮ ಆಹಾರ, ಬಿಯರ್​​, ವೈನ್​, ಜ್ಯೂಸ್​ ಜೊತೆಗೆ ಟೀಂ ಇಂಡಿಯಾ ಆಟಗಾರರ ಜೊತೆ ಪ್ರಶ್ನೋತ್ತರ ಅವಧಿ ನಡೆಸುವ ಅವಕಾಶವಿರುತ್ತೆ ಎಂದು ಹೇಳಲಾಗಿತ್ತು. ಈ ಇವೆಂಟ್​ ಜನವರಿ 5ರಂದು ಸಿಡ್ನಿಯ ಮಂಜಿತ್ಸ್​ ವಾರ್ಫ್​ ರೆಸ್ಟಾರೆಂಟ್​​ನಲ್ಲಿ ಆಯೋಜಿಸಲಾಗಿದೆ ಎಂದು ಇದರಲ್ಲಿ ತಿಳಿಸಲಾಗಿತ್ತು.

ಟಿಕೆಟ್​ನ್ನ ಖರೀದಿ ಮಾಡಿದ್ದ 200 ಮಂದಿ ಟೀಂ ಇಂಡಿಯಾ ಆಟಗಾರರನ್ನ ಭೇಟಿಯಾಗುವ ಕನಸನ್ನ ಕಾಣುತ್ತಿದ್ದರು. ಆದರೆ ಇದು ಸುಳ್ಳು ವಿಚಾರ ಎಂದು ಹೇಳೋ ಮೂಲಕ ಸ್ಥಳೀಯ ಪೊಲೀಸರು ಟಿಕೆಟ್​​ ಖರೀದಿದಾರರಿಗೆ ಶಾಕಿಂಗ್​ ಮಾಹಿತಿಯನ್ನ ನೀಡಿದ್ದಾರೆ.
ಮಂಜಿತ್ಸ್​ ವಾರ್ಫ್​ನ ಜನರಲ್​ ಮ್ಯಾನೇಜರ್​ ದೀಪ್​ ಗುರ್ಜಲ್​ ರನ್ನ ಬಂಧಿಸಲಾಗಿತ್ತು.

ಆದರೆ ಈಗ ಪ್ರಕರಣದ ಹಿಂದಿನ ಪ್ರಮುಖ ರೂವಾರಿ ಸಿಕ್ಕಿಬಿದ್ದಿದ್ದು ರೆಸ್ಟಾರೆಂಟ್ ಗೂ ಹಾಗೂ ಈ ವಂಚನೆಗೆ ಯಾವುದೇ ಸಂಬಂಧವಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಪೊಲೀಸರು ಈಗ ವಂಚನೆ ಮಾಡಿದವರಿಂದ ಸಂತ್ರಸ್ತರಿಗೆ ಹಣ ವಾಪಸ್ ಕೊಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...