alex Certify ಹತ್ಯೆಯಾಗುತ್ತಿದ್ದಾರೆ ವಿದೇಶದಲ್ಲಿರುವ ಭಾರತದ ಶತ್ರುಗಳು; ಪ್ರಾಣ ಭೀತಿಯಲ್ಲಿ ಉಗ್ರ ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹತ್ಯೆಯಾಗುತ್ತಿದ್ದಾರೆ ವಿದೇಶದಲ್ಲಿರುವ ಭಾರತದ ಶತ್ರುಗಳು; ಪ್ರಾಣ ಭೀತಿಯಲ್ಲಿ ಉಗ್ರ ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್

ಪಾಕಿಸ್ತಾನದ ಕರಾಚಿಯಲ್ಲಿ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪೈಕಿ ಒಬ್ಬನಾದ ಮುಫ್ತಿ ಕಸರ್ ಫಾರೂಕ್ ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮುಫ್ತಿ ಕಾಸರ್ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಸ್ಥಾಪಕ ಸದಸ್ಯನಾಗಿದ್ದು, ಉಗ್ರಗಾಮಿ ಹಫೀಜ್ ಸಯೀದ್‌ನ ನಿಕಟ ಸಹಚರ ಎಂದು ತಿಳಿದುಬಂದಿದೆ.

ಘಟನೆಯ ವಿಡಿಯೋ ಕೂಡ ಹೊರಬಿದ್ದಿದ್ದು, ಗುಂಡಿನ ಚಕಮಕಿ ನಡೆದಾಗ ಮುಫ್ತಿ ಕಾಸರ್ ಮಸೀದಿಯ ಹೊರಗೆ ಜನರ ಗುಂಪಿನೊಂದಿಗೆ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸುತ್ತದೆ. ತಪ್ಪಿಸಿಕೊಳ್ಳುವ ಯತ್ನದಲ್ಲಿ ಮುಫ್ತಿ ಕಾಸರ್ ಅವಸರದಿಂದ ಓಡುತ್ತಿರುವುದು ಕಂಡು ಬಂದರೂ ಬೆನ್ನಿಗೆ ಗುಂಡು ತಗುಲಿ ಎಡವಿ ಬಿದ್ದಿದ್ದಾನೆ.

ಗುಂಡಿನ ಸದ್ದು ಕೇಳಿದ ಸ್ಥಳದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಲು ಯತ್ನಿಸಿದ್ದಾರೆ. ಗುಂಡೇಟಿಗೆ ಸಿಲುಕಿದವರಲ್ಲಿ ಹತ್ತಿರದ ಮದರಸಾದಲ್ಲಿ ಓದುತ್ತಿರುವ ಕೆಲವು ಮಕ್ಕಳೂ ಇದ್ದಾರೆ. ಅವರಲ್ಲಿ ಒಬ್ಬರು ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗುಂಡಿನ ದಾಳಿಯ ನಂತರ ಮೋಟಾರು ಸೈಕಲ್‌ಗಳಲ್ಲಿ ಬಂದ ದಾಳಿಕೋರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅವರ ಗುರುತು ಪತ್ತೆಯಾಗಿಲ್ಲ. ನಂತರ ಮುಫ್ತಿ ಕಾಸರ್ ಫಾರೂಕ್ ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ವೈದ್ಯರು ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದರು.

ಇತ್ತೀಚಿನ ದಿನಗಳಲ್ಲಿ ಭಾರತದ ವಿರುದ್ಧ ಸಂಚು ರೂಪಿಸುತ್ತಿರುವ ಹಲವಾರು ಭಯೋತ್ಪಾದಕರು ವಿಶ್ವದಾದ್ಯಂತ ಹತ್ಯೆಯಾಗುತ್ತಿದ್ದಾರೆ. ಇದರಲ್ಲಿ ಕೆಲವು ಹತ್ಯೆಗಳು ಪಾಕಿಸ್ತಾನದಲ್ಲಿ ನಡೆಯುತ್ತಿವೆ ಎಂಬುದು ಗಮನಾರ್ಹ. ಮುಫ್ತಿ ಕಾಸರ್ ಫಾರೂಕ್ ಅಂತಹ ವ್ಯಕ್ತಿಗಳಲ್ಲಿ ಒಬ್ಬ. ಆತ ಭಯೋತ್ಪಾದಕ ಹಫೀಜ್ ಸಯೀದ್‌ನ ನಿಕಟ ಸಹಚರ ಮಾತ್ರವಲ್ಲದೆ ಭಾರತವು ಹಫೀಜ್ ಸಯೀದ್‌ನಂತೆಯೇ ದೀರ್ಘಕಾಲದವರೆಗೆ ಹುಡುಕುತ್ತಿದ್ದ ವ್ಯಕ್ತಿಯೂ ಆಗಿದ್ದ. ಆದರೆ ಪಾಕಿಸ್ತಾನದಲ್ಲಿ ನೆಲೆಸಿರುವ ಕಾರಣ ಭಾರತಕ್ಕೆ ಆತನನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ.

ಭಾರತದಲ್ಲಿ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮತ್ತು ಲಷ್ಕರ್-ಎ-ತೊಯ್ಬಾದ ಮುಖ್ಯಸ್ಥ ಹಫೀಜ್ ಸಯೀದ್ ಹೆಚ್ಚು ಸವಾಲಿನ ಸಂದರ್ಭಗಳನ್ನು ಎದುರಿಸುತ್ತಿದ್ದಾನೆ. ಸೆಪ್ಟೆಂಬರ್ 26 ರಿಂದ ಅವರ ಮಗ ಕಮಾಲುದ್ದೀನ್ ಸಯೀದ್ ಕೂಡ ನಾಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ. ಆತನ ಇರುವಿಕೆಯ ಬಗ್ಗೆ ಇದುವರೆಗೆ ಯಾವುದೇ ಖಚಿತ ಮಾಹಿತಿ ಹೊರಬಿದ್ದಿಲ್ಲ. ಅಂದು ಪೇಶಾವರದಿಂದ ಕಾರಿನಲ್ಲಿ ಬಂದ ಕೆಲವು ವ್ಯಕ್ತಿಗಳು ಕಮಾಲುದ್ದೀನ್ ಸಯೀದ್‌ನನ್ನು ಅಪಹರಿಸಿದ್ದಾರೆ ಎಂದು ಹೇಳಲಾಗಿದ್ದು, ನಂತರದ ಆತನ ಸ್ಥಳ ಪತ್ತೆಯಾಗಿಲ್ಲ.

ಹಫೀಜ್ ಸಯೀದ್ ಮಗನನ್ನು ಅಪಹರಿಸಿದವರು ಯಾರು ?

ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI ಈ ಪ್ರಕರಣವನ್ನು ಸಕ್ರಿಯವಾಗಿ ತನಿಖೆ ನಡೆಸುತ್ತಿದೆ. ಆದರೆ ಅಪಹರಣಕಾರರ ಗುರುತು ಮತ್ತು ಹಫೀಜ್ ಸಯೀದ್‌ನ ಮಗ ಪ್ರಸ್ತುತ ಎಲ್ಲಿದ್ದಾನೆ ಎಂದು ಖಚಿತಪಡಿಸಲಾಗಿಲ್ಲ.

ಹೆಚ್ಚುವರಿಯಾಗಿ ಲಷ್ಕರ್-ಎ-ತೊಯ್ಬಾ ಸದಸ್ಯರ ಮೇಲೆ ನಿರಂತರ ಮತ್ತು ಹೆಚ್ಚುತ್ತಿರುವ ದಾಳಿಯಿಂದಾಗಿ, ISI ಕಮಾಲುದ್ದೀನ್ ಸಯೀದ್‌ನನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ ಮತ್ತು ಅವನ ಅಪಹರಣದ ಸುದ್ದಿ ಸುಳ್ಳು ಎಂದು ಪಾಕಿಸ್ತಾನಿ ಮಾಧ್ಯಮಗಳಲ್ಲಿ ಪರಿಶೀಲಿಸದ ವರದಿಗಳಿವೆ.

ಇದರೊಂದಿಗೆ ಹಫೀಜ್ ಸಯೀದ್ ಸಹೋದರ ತಲ್ಹಾನ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ. ತಲ್ಹಾ ಲಷ್ಕರ್‌ನ ಹಣಕಾಸು ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿದ್ದು, ಹಲವು ವರ್ಷಗಳಿಂದ ಭಯೋತ್ಪಾದಕರೊಂದಿಗೆ ಕೆಲಸ ಮಾಡುತ್ತಿದ್ದ. ಇಷ್ಟಾದರೂ ಕೂಡಾ ಲಷ್ಕರ್-ಎ-ತೊಯ್ಬಾದ ಮುಖ್ಯಸ್ಥ ಹಫೀಜ್ ಸಯೀದ್ ಪ್ರಾಣ ಭೀತಿಯನ್ನು ಎದುರಿಸುತ್ತಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...