alex Certify RPF ಸಿಬ್ಬಂದಿ ಸಮಯಪ್ರಜ್ಞೆಯಿಂದ ಉಳೀತು ವ್ಯಕ್ತಿ ಪ್ರಾಣ…! ಪವಾಡಸದೃಶ್ಯ ಘಟನೆ ಸಿಸಿ ಟಿವಿಯಲ್ಲಿ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

RPF ಸಿಬ್ಬಂದಿ ಸಮಯಪ್ರಜ್ಞೆಯಿಂದ ಉಳೀತು ವ್ಯಕ್ತಿ ಪ್ರಾಣ…! ಪವಾಡಸದೃಶ್ಯ ಘಟನೆ ಸಿಸಿ ಟಿವಿಯಲ್ಲಿ ಸೆರೆ

ರೈಲ್ವೆ ಸಂರಣಾ ಪಡೆಯ (ಆರ್​ಪಿಎಫ್​) ಇಬ್ಬರು ಅಧಿಕಾರಿಗಳು ಇತ್ತೀಚೆಗೆ ಪ್ಲಾಟ್‌ಫಾರ್ಮ್ ಮತ್ತು ಚಲಿಸುವ ರೈಲಿನ ನಡುವಿನ ಸಣ್ಣ ಅಂತರದಲ್ಲಿ ಆಕಸ್ಮಿಕವಾಗಿ ಬಿದ್ದ ವ್ಯಕ್ತಿಯ ಜೀವವನ್ನು ಉಳಿಸಿದ್ದಾರೆ.

ತಮಿಳುನಾಡಿನ ಕೊಯಮತ್ತೂರು ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಸಿಸಿ ಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

ವಿಡಿಯೋ ಕ್ಲಿಪ್​ನಲ್ಲಿರುವಂತೆ ನಿಲ್ದಾಣದಲ್ಲಿ ರೈಲು ಚಲಿಸುತ್ತಿರುವುದನ್ನು ತೋರಿಸುತ್ತದೆ, ಒಬ್ಬ ವ್ಯಕ್ತಿ ಇದ್ದಕ್ಕಿದ್ದಂತೆ ಜಾರಿಕೊಂಡು ಪ್ಲಾಟ್‌ಫಾರ್ಮ್ ಮತ್ತು ಟ್ರ್ಯಾಕ್‌ ಮಧ್ಯೆ ಬಿದ್ದಿದ್ದಾರೆ. ಇದನ್ನು ಗಮನಿಸಿದ ಇಬ್ಬರು ರೈಲ್ವೆ ಭದ್ರತಾ ಪಡೆ ಅಧಿಕಾರಿಗಳು ಅವನನ್ನು ಎಳೆಯಲು ತ್ವರಿತವಾಗಿ ಸ್ಪಂದಿಸುತ್ತಾರೆ. ಈ ಪ್ರಯತ್ನದಲ್ಲಿ ಕೈ ಜೋಡಿಸಲು ಅಲ್ಲಿದ್ದ ಇತರೆ ಪ್ರಯಾಣಿಕರು ಸೇರುತ್ತಾರೆ.

ಸಣ್ಣ ಅಂತರ ಇರುವುದರಿಂದ ಆ ತಪ್ಪಿಸಿಕೊಳ್ಳಲು ಕಷ್ಟವೇ, ರಕ್ಷಣೆ ಕಾರ್ಯವೂ ಸುಲಭವಾಗಿರಲಿಲ್ಲ. ಆದರೆ ಭದ್ರತಾ ಪಡೆಯ ಅಧಿಕಾರಿಗಳು ಯಶಸ್ವಿಯಾಗಿ ರಕ್ಷಿಸುತ್ತಾರೆ.

ಇಬ್ಬರು ಆರ್​ಪಿಎಫ್​ ಅಧಿಕಾರಿಗಳನ್ನು ಎಎಸ್​ಐ ಅರುಂಜಿ ಮತ್ತು ಲೇಡಿ ಎಚ್​ಸಿ ಪಿಪಿ ಮಿನಿ ಎಂದು ಗುರುತಿಸಲಾಗಿದೆ. ಅಧಿಕಾರಿಯ ಶೌರ್ಯಕ್ಕೆ ಗೌರವ ಸಲ್ಲಿಸಲು ಆರ್​ಪಿಎಫ್​ ಇಂಡಿಯಾದ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಸಿಸಿಟಿವಿ ದೃಶ್ಯಗಳನ್ನು ಹಂಚಿಕೊಳ್ಳಲಾಗಿದೆ. ಶೌರ್ಯ ಮತ್ತು ಧೈರ್ಯದ ಮತ್ತೊಂದು ಕಥೆ! ಎಂದು ಆ ಘಟನೆಯ ವಿವರಣೆ ನೀಡಲಾಗಿದೆ.

ಕ್ಲಿಪ್​ ಜಾಲತಾಣದಲ್ಲಿ ಕಾಣಿಸಿಕೊಂಡ ತಕ್ಷಣ ಸಾವಿರಾರು ವೀಕ್ಷಣೆ ಕಂಡಿದೆ. ಧೈರ್ಯಶಾಲಿ ಅಧಿಕಾರಿಗಳ ಪ್ರಯತ್ನಕ್ಕೆ ನೆಟ್ಟಿಗರು ಕೃತಜ್ಞತೆ ಸಲ್ಲಿಸಿ ಕಾಮೆಂಟ್​ ಮಾಡಿದ್ದಾರೆ.

ವೀಡಿಯೋ ನೋಡಿದರೆ, ಆ ವ್ಯಕ್ತಿ ಸಣ್ಣಪುಟ್ಟ ಗಾಯಗಳೊಂದಿಗೆ ಬಹುತೇಕ ಮಾರಣಾಂತಿಕ ಅಪಘಾತದಿಂದ ಹೊರಬಂದಂತೆ ತೋರುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...