alex Certify WAR BREAKING: ಉಕ್ರೇನ್-ರಷ್ಯಾ ಶಾಂತಿ ಸಭೆ ಆರಂಭ; ಸಂಧಾನಕ್ಕೂ ಮುನ್ನ ಷರತ್ತು ಹಾಕಿದ ಉಕ್ರೇನ್ ಅಧ್ಯಕ್ಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WAR BREAKING: ಉಕ್ರೇನ್-ರಷ್ಯಾ ಶಾಂತಿ ಸಭೆ ಆರಂಭ; ಸಂಧಾನಕ್ಕೂ ಮುನ್ನ ಷರತ್ತು ಹಾಕಿದ ಉಕ್ರೇನ್ ಅಧ್ಯಕ್ಷ

ಗೋಮೆಲ್; ಉಕ್ರೇನ್ ಮೇಲಿನ ರಷ್ಯಾ ದಾಳಿ ಐದನೇ ದಿನವೂ ಮುಂದುವರೆದಿದ್ದು, ಈ ನಡುವೆ ಉಭಯ ದೇಶಗಳ ನಡುವೆ ಬೆಲಾರಸ್ ನಲ್ಲಿ ಶಾಂತಿ ಸಭೆ ಆರಂಭವಾಗಿದೆ.

ಯುದ್ಧ ಆರಂಭದ ಬಳಿಕ ನಡೆಯುತ್ತಿರುವ 2ನೇ ಸುತ್ತಿನ ಶಾಂತಿ ಮಾತುಕತೆ ಇದಾಗಿದ್ದು, ಬೆಲಾರಸ್ ನಲ್ಲಿ ಉಕ್ರೇನ್ ಹಾಗೂ ರಷ್ಯಾ ನಾಯಕರ ಮಹತ್ವದ ಸಭೆ ಆರಂಭವಾಗಿದೆ. ಶಾಂತಿ ಸಭೆಯಲ್ಲಿ ಉಕ್ರೇನ್ ನ ರಕ್ಷಣಾ ಸಚಿವರು ಹಾಗೂ 7 ಸದಸ್ಯರು ಭಾಗಿಯಾಗಿದ್ದಾರೆ.

ಈ ಚಿತ್ರದಲ್ಲಿರೋ ಹಿಮ ಚಿರತೆಯನ್ನು ನೀವು ಪತ್ತೆ ಮಾಡಬಲ್ಲಿರಾ….?

ಸಂಧಾನ ಸಭೆಗೂ ಮುನ್ನ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ರಷ್ಯಾಗೆ ನೇರ ಷರತ್ತು ವಿಧಿಸಿದ್ದು, ರಷ್ಯಾ ತಕ್ಷಣ ತನ್ನ ಸೇನೆಯನ್ನು ಹಿಂಪಡೆದು, ಕದನವಿರಾಮ ಘೋಷಣೆ ಮಾಡಬೇಕು ಎಂದು ಹೇಳಿದ್ದಾರೆ.

ಒಟ್ಟಾರೆ ಉಕ್ರೇನ್ ಹಾಗೂ ರಷ್ಯಾ ನಡುವಿನ ಶಾಂತಿ ಮಾತುಕತೆ ಮೇಲೆ ಇಡೀ ವಿಶ್ವದ ಕಣ್ಣು ನೆಟ್ಟಿದ್ದು, ಮಾತುಕತೆ ಮೂಲಕವೇ ಕದನ ಕೊನೆಗೊಳ್ಳಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...