alex Certify BIG NEWS: ಜ. 17 ರಿಂದ ಲಾರಿ ಮಾಲೀಕರ ಮುಷ್ಕರ: ಅಗತ್ಯ ವಸ್ತು ಸಾಗಣೆಗೆ ವಿನಾಯಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಜ. 17 ರಿಂದ ಲಾರಿ ಮಾಲೀಕರ ಮುಷ್ಕರ: ಅಗತ್ಯ ವಸ್ತು ಸಾಗಣೆಗೆ ವಿನಾಯಿತಿ

ಬೆಂಗಳೂರು: ಜನವರಿ 17 ರಿಂದ ರಾಜ್ಯದ ಲಾರಿ ಮಾಲೀಕರ ಸಂಘದಿಂದ ಅಭಿವೃದ್ಧಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗಿದೆ.

ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಲಾರಿ ಚಾಲಕರಿಗೆ 10 ವರ್ಷ ಜೈಲು ಶಿಕ್ಷೆ, 7 ಲಕ್ಷ ರೂಪಾಯಿವರೆಗೆ ದಂಡ ವಿಧಿಸುವ ಕಠಿಣ ನಿಯಮ ಜಾರಿಯಿಂದ ಕೇಂದ್ರ ಸರ್ಕಾರ ಹಿಂದೆ ಸರಿಯಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಕ್ರಮಿಸಿ ಮುಷ್ಕರ ಕೈಗೊಳ್ಳಲಾಗಿದೆ.

ರಾಜ್ಯ ಲಾರಿ ಮಾಲೀಕರ ಸಂಘ, ದಕ್ಷಿಣ ಭಾರತ ಲಾರಿ ಮಾಲೀಕರ ಸಂಘ ಗುರುವಾರ ಸಭೆ ನಡೆಸಿ ಜನವರಿ 17ರಿಂದ ಮುಷ್ಕರ ನಡೆಸುವ ಬಗ್ಗೆ ಮತ್ತೊಮ್ಮೆ ತೀರ್ಮಾನ ಕೈಗೊಂಡಿವೆ. ರಾಜ್ಯ ಲಾರಿ ಮಾಲೀಕರು ಕೈಗೊಂಡಿರುವ ಮುಷ್ಕರಕ್ಕೆ ದಕ್ಷಿಣ ಭಾರತದ ಇತರೆ ರಾಜ್ಯಗಳ ಲಾರಿ ಮಾಲೀಕರು ಚಾಲಕರು ಬೆಂಬಲ ನೀಡಲು ಮನವಿ ಮಾಡಲಾಗಿದೆ. ಒಂದು ವೇಳೆ ಬೇರೆ ರಾಜ್ಯಗಳ ಲಾರಿ ಮಾಲೀಕರು ಬೆಂಬಲ ನೀಡದಿದ್ದರೂ ಕರ್ನಾಟಕದ ಲಾರಿ ಮಾಲೀಕರು ಮತ್ತು ಚಾಲಕರು ಮುಷ್ಕರ ನಡೆಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಪೆಟ್ರೋಲ್, ಹಾಲು ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಲಾರಿಗಳಿಗೆ ಮುಷ್ಕರದಿಂದ ವಿನಾಯಿತಿ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...