alex Certify ನಿವೃತ್ತರಾದ ಡಿ ದರ್ಜೆ ನೌಕರನಿಗೆ ವಿಶೇಷ ಗೌರವದೊಂದಿಗೆ ‘ಬೀಳ್ಕೊಡುಗೆ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿವೃತ್ತರಾದ ಡಿ ದರ್ಜೆ ನೌಕರನಿಗೆ ವಿಶೇಷ ಗೌರವದೊಂದಿಗೆ ‘ಬೀಳ್ಕೊಡುಗೆ’

Special Gift! ನಿವೃತ್ತಿ ದಿನ ಎಸಿ ಕಾರಿನಲ್ಲಿ ಮನೆಗೆ ತೆರಳಿದ ಡಿ ದರ್ಜೆ ನೌಕರ! | udayavani

‘ನಿವೃತ್ತಿ’ ಎಂಬುದು ಪ್ರತಿಯೊಬ್ಬ ಉದ್ಯೋಗಿ ಜೀವನದಲ್ಲಿ ನಡೆಯುವ ಸಹಜ ಪ್ರಕ್ರಿಯೆ. ಆದರೆ ನಿವೃತ್ತಿ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳು, ಸಹೋದ್ಯೋಗಿಗಳು ನೀಡುವ ಬೀಳ್ಕೊಡುಗೆ ವಿಶೇಷ ರೀತಿಯಲ್ಲಿ ಇದ್ದರೆ ಅದು ಅರ್ಥಪೂರ್ಣವಾಗಿರುತ್ತದೆ. ಅಂತಹದೊಂದು ಘಟನೆ ಸಾಗರದಲ್ಲಿ ನಡೆದಿದೆ.

ಹೌದು, ಸಾಗರ ಉಪ ವಿಭಾಗ ಅಧಿಕಾರಿ ಕಚೇರಿಯಲ್ಲಿ ಡಿ ದರ್ಜೆ ನೌಕರರಾಗಿ ಸೇವೆ ಸಲ್ಲಿಸಿದ್ದ ಕೃಷ್ಣಪ್ಪನವರು ಸೋಮವಾರದಂದು ನಿವೃತ್ತರಾಗಿದ್ದು, ಅವರ ಬೀಳ್ಕೊಡುಗೆ ಸಮಾರಂಭವನ್ನು ಉಪ ವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಅವಿಸ್ಮರಣೀಯವಾಗಿಸಿದ್ದಾರೆ.

ಕೃಷ್ಣಪ್ಪನವರು ನಿವೃತ್ತರಾದ ಸಂದರ್ಭದಲ್ಲಿ ಅವರಿಗೆ ಹಾರ, ನೆನಪಿನ ಕಾಣಿಕೆ ನೀಡಿದ್ದರ ಜೊತೆಗೆ ಉಪ ವಿಭಾಗಾಧಿಕಾರಿ ಪಲ್ಲವಿಯವರು ತಮ್ಮ ಸರ್ಕಾರಿ ಕಾರಿನಲ್ಲಿ ಅವರನ್ನು ಮನೆಯವರೆಗೆ ಕಳುಹಿಸಿ ಬಂದಿದ್ದಾರೆ. ಈ ಸಂದರ್ಭದಲ್ಲಿ ಕೃಷ್ಣಪ್ಪನವರನ್ನು ತಾವು ಕುಳಿತುಕೊಳ್ಳುವ ಮುಂದಿನ ಸೀಟಿನಲ್ಲಿ ಕೂರಿಸಿದ್ದಲ್ಲದೆ ಪಲ್ಲವಿ ಸಾತೇನಹಳ್ಳಿ ಹಿಂದಿನ ಸೀಟಿನಲ್ಲಿ ಆಸೀನರಾಗಿದ್ದು, ಕೃಷ್ಣಪ್ಪನವರ ಮನೆಯವರೆಗೂ ತೆರಳಿ ಶುಭಕೋರಿ ಬಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...