alex Certify ಮಹಾಗಣಪತಿ ರಥೋತ್ಸವ: ಬಾಳೆಹಣ್ಣಿನ ಮೇಲೆ ಈಶ್ವರಪ್ಪ- ಮೋದಿ 3.0 ಎಂದು ಬರೆದು ರಥಕ್ಕೆ ಎಸೆದು ಪ್ರಾರ್ಥಿಸಿದ ಭಕ್ತರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾಗಣಪತಿ ರಥೋತ್ಸವ: ಬಾಳೆಹಣ್ಣಿನ ಮೇಲೆ ಈಶ್ವರಪ್ಪ- ಮೋದಿ 3.0 ಎಂದು ಬರೆದು ರಥಕ್ಕೆ ಎಸೆದು ಪ್ರಾರ್ಥಿಸಿದ ಭಕ್ತರು

ಶಿವಮೊಗ್ಗ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಲೋಕಸಭಾ ಅಖಾಡಕ್ಕೆ ಇಳಿದಿದ್ದಾರೆ. ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿಯಾಗಿ ಬಿ.ವೈ.ರಾಘವೇಂದ್ರ ಕಣದಲ್ಲಿದ್ದಾರೆ. ಚುನಾವಣೆಯಲ್ಲಿ ಈಶ್ವರಪ್ಪ ಹಾಗೂ ಮೋದಿ ಇಬ್ಬರೂ ಗೆಲ್ಲಲಿ ಎಂದು ಬೆಂಬಲಿಗರು ದೇವರಲ್ಲಿ ಪ್ರಾರ್ಥಿಸಿರುವ ಘಟನೆ ಸಾಗರದ ಮಹಾಗಣಪತಿ ರಥೋತ್ಸವದಲ್ಲಿ ನಡೆದಿದೆ.

ಸಾಗರದ ಮಹಾಗಣಪತಿ ರಥೋತ್ಸವದ ವೇಳೆ ಭಕ್ತರು ಬಾಳೆಹಣ್ಣಿನ ಮೇಲೆ ಈ ಬಾರಿ ಈಶ್ವರಪ್ಪ ಮತ್ತು ಮೋದಿ 3.0 ಎಂದು ಬರೆದು ರಥಕ್ಕೆ ಎಸೆದು ಪ್ರಾರ್ಥಿಸಿದ್ದಾರೆ.

ಇಂದಿಣಿಂದ 6 ದಿನಗಳ ಕಾಲ ಮಹಾಗಣಪತಿ ರಹೋತ್ಸವ ನಡೆಯಲಿದೆ. ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಿದ್ದು, ಈ ಬಾರಿ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಈಶ್ವರಪ್ಪ ಹಾಗೂ ಮೋದಿ ಗೆಲ್ಲಲಿ ಎಂದು ಭಕ್ತರು, ರಾಜಕೀಯ ನಾಯಕರ ಬೆಂಬಲಿಗರು ಪ್ರಾರ್ಥಿಸಿರುವುದು ವಿಶೇಷ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...