alex Certify ಅಂತ್ಯಸಂಸ್ಕಾರಕ್ಕೆ ಮೊದಲು ಹಚ್ಚೆ ಗುರುತಿನಿಂದ ಬಯಲಾಯ್ತು ಅನಾಥ ಶವದ ರಹಸ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂತ್ಯಸಂಸ್ಕಾರಕ್ಕೆ ಮೊದಲು ಹಚ್ಚೆ ಗುರುತಿನಿಂದ ಬಯಲಾಯ್ತು ಅನಾಥ ಶವದ ರಹಸ್ಯ

ಮಂಡ್ಯ: ಅನಾಥ ಶವ ಎಂದು ಅಂತ್ಯಸಂಸ್ಕಾರಕ್ಕೆ ಪೊಲೀಸರು ನಿರ್ಧಾರ ಮಾಡುತ್ತಿದ್ದ ಸಂದರ್ಭದಲ್ಲಿ ಮೃತದೇಹದ ಕೈಮೇಲೆ ಕಂಡು ಬಂದ ಹಚ್ಚೆ ಗುರುತಿನಿಂದ ವ್ಯಕ್ತಿಯನ್ನು ಪತ್ತೆ ಮಾಡಲಾಗಿದೆ.

ಶ್ರೀರಂಗಪಟ್ಟಣದ ಚೆಕ್ ಪೋಸ್ಟ್ ಸಮೀಪ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಅನಾರೋಗ್ಯದಿಂದ ವ್ಯಕ್ತಿ ಮೃತಪಟ್ಟಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅನಾಥ ಶವವೆಂದು ತಿಳಿದು ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹ ಇಡಲಾಗಿದೆ.

ಪೊಲೀಸರು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಕೈ ಮೇಲೆ ಹಚ್ಚೆಯ ಗುರುತು ಕಂಡುಬಂದಿದೆ. ಮೃತವ್ಯಕ್ತಿ ಬೆಳಗೊಳ ಗ್ರಾಮದ ರಾಮೇಗೌಡ(65) ಎನ್ನುವುದು ಗೊತ್ತಾಗಿದೆ. ಕಳೆದ 15 ದಿನದಿಂದ ನಾಪತ್ತೆಯಾಗಿದ್ದ ರಾಮೇಗೌಡ ಕುಟುಂಬದವರು ಮೈಮೇಲಿದ್ದ ಹಚ್ಚೆ ಗುರುತು ಗಮನಿಸಿ ಅಂತ್ಯಸಂಸ್ಕಾರಕ್ಕೆ ಮೃತದೇಹವನ್ನು ತೆಗೆದುಕೊಂಡು ಹೋಗಿದ್ದಾರೆ. ಶ್ರೀರಂಗಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...