alex Certify SHOCKING NEWS: ನ್ಯಾಯ ಕೊಡಿಸದ ಪೊಲೀಸರು; ಕಮೀಷನರ್ ಕಚೇರಿ ಎದುರೇ ವಿಷ ಕುಡಿದ ವ್ಯಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ನ್ಯಾಯ ಕೊಡಿಸದ ಪೊಲೀಸರು; ಕಮೀಷನರ್ ಕಚೇರಿ ಎದುರೇ ವಿಷ ಕುಡಿದ ವ್ಯಕ್ತಿ

ಬೆಂಗಳೂರು: ತನಗೆ ಹಾಗೂ ತನ್ನ ಮಗಳಿಗೆ ಪೊಲೀಸರು ನ್ಯಾಯ ಕೊಡಿಸಿಲ್ಲ, ಅನ್ಯಾಯವಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಪೊಲೀಸ್ ಕಮೀಷನರ್ ಕಚೇರಿ ಎದುರು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ವಿಜಯಪುರ ಮೂಲದ ಸಿದ್ದರಾಮಗೌಡ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಅಮೃತಹಳ್ಳಿ ಪೊಲೀಸರು ನಮಗೆ ನ್ಯಾಯಕೊಡಿಸಿಲ್ಲ ಎಂದು ಆರೋಪಿಸಿ ಪೊಲೀಸ್ ಕಮೀಷನರ್ ಅವರನ್ನು ಭೇಟಿಯಾಗಿ ದೂರು ನೀಡಲೆಂದು ಕಮೀಷನರ್ ಕಚೇರಿಗೆ ಆಗಮಿಸಿದ್ದಾರೆ. ಆದರೆ ಕಮೀಷನರ್ ಪ್ರತಾಪ್ ರೆಡ್ಡಿ ಭೇಟಿಗೆ ಅವಕಾಶ ಸಿಕ್ಕಿಲ್ಲ.

ಇದರಿಂದ ಬೇಸತ್ತ ಸಿದ್ದರಾಮಗೌಡ ತನ್ನ ಬಳಿಯಿದ್ದ ವಿಷದ ಬಾಟಲಿ ತೆಗೆದು ತಕ್ಷಣ ವಿಷ ಸೇವಿಸಿದ್ದಾರೆ. ತನ್ನ ಮಗಳಿಗೆ ವರದಕ್ಷಿಣೆ ಕಿರುಕುಳ ನೀಡಲಾಗಿದ್ದು, ಈ ಬಗ್ಗೆ ನಾನು ಹಾಗೂಮಗಳು ದೂರು ನೀಡಿದರೂ ಅಮೃತಹಳ್ಳಿ ಪೊಲೀಸರು ನಮಗೆ ನ್ಯಾಯ ಒದಗಿಸಿಕೊಟ್ಟಿಲ್ಲ. ನ್ಯಾಯ ಕೊಡಿಸುವುದಾಗಿ ಹೇಳಿ ಹಣವನ್ನೂ ಪಡೆದು ಅನ್ಯಾಯ ಮಾಡಿದ್ದಾರೆ ಎಂದು ಸಿದ್ದರಾಮಗೌಡ ಆರೋಪಿಸಿದ್ದಾರೆ. ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಸಿದ್ದರಾಮಗೌಡ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...