alex Certify SHOCKING NEWS: ಈಜಲು ತೆರಳಿದ್ದಾಗ ದುರಂತ: ತಂಗಿಯ ಕಣ್ಣೆದುರೇ ಕೃಷಿ ಹೊಂಡದಲ್ಲಿ ಮುಳುಗಿ ಅಣ್ಣ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಈಜಲು ತೆರಳಿದ್ದಾಗ ದುರಂತ: ತಂಗಿಯ ಕಣ್ಣೆದುರೇ ಕೃಷಿ ಹೊಂಡದಲ್ಲಿ ಮುಳುಗಿ ಅಣ್ಣ ಸಾವು

ಕೋಲಾರ: ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ನಾಗನಾಳ ಗ್ರಾಮದಲ್ಲಿ ನಡೆದಿದೆ.

ಗೌತಮ್ ಗೌಡ (26) ಮೃತ ವ್ಯಕ್ತಿ. ಮೈಸೂರು ಮೂಲದ ರಾಘವೇಂದ್ರ ಬಡಾವಣೆ ನಿವಾಸಿ. ಗೌತಮ್ ತನ್ನ ತಂದೆಯ ಊರಾದ ವೇಮಗಲ್ ಬಳಿಯ ನಾಗನಾಳ ಗ್ರಾಮಕ್ಕೆ ಬಂದಿದ್ದ. ಈ ವೇಳೆ ಸಹೋದರಿ ಜೊತೆ ಕೃಷಿ ಹೊಂಡಕ್ಕೆ ತೆರಳಿದ್ದ.

ಸರಿಯಾಗಿ ಈಜು ಬಾರದಿದ್ದರೂ ಈಜಲೆಂದು ಕೃಷಿ ಹೊಂಡಕ್ಕೆ ಇಳಿದಿದ್ದಾನೆ. ಅಣ್ಣ ಈಜುವುದನ್ನು ತಂಗಿ ತನ್ನ ಮೊಬೈಲ್ ನಲ್ಲಿ ಸೆರೆಹಿಡಿಯುತ್ತಿದ್ದಾಳೆ. ಆರಂಭದಲ್ಲಿ ಚನ್ನಾಗಿಯೇ ಈಜುತ್ತಿದ್ದ ಗೌತಮ್ ಕೆಲ ಸಮಯದಲ್ಲಿ ಈಜುತ್ತಲೇ ಕ್ರಮೇಣ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಅಣ್ಣ ನೀರಿನಲ್ಲಿ ಮುಳುಗುತ್ತಿದ್ದರೂ ವಿಡಿಯೋ ಮಾಡುತ್ತಿದ್ದ ತಂಗಿಗೆ ಅಣ್ಣನ ಸಾವಿನ ದವಡೆಗೆ ಸಿಲುಕಿರುವ ಅರಿವಾಗಿಲ್ಲ. ತಂಗಿಯ ಕಣ್ಣೆದೆರೇ ಅಣ್ಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...