alex Certify ಈ ರಾಶಿಯವರಿಗೆ ವ್ಯಾಪಾರ – ವ್ಯವಹಾರದಲ್ಲಿ ಕಾದಿದೆ ಲಾಭ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ವ್ಯಾಪಾರ – ವ್ಯವಹಾರದಲ್ಲಿ ಕಾದಿದೆ ಲಾಭ….!

ಮೇಷ: ವೈಯಕ್ತಿಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗದೇ ಒತ್ತಡವನ್ನು ಅನುಭವಿಸಲಿದ್ದೀರಿ. ವ್ಯಾಪಾರ – ವ್ಯವಹಾರದಲ್ಲಿ ಅಂದುಕೊಳ್ಳುವಂತಹ ಲಾಭವೇನು ಕಂಡು ಬರೋದಿಲ್ಲ. ಸ್ತ್ರೀಯರಿಗೆ ಅನಾರೋಗ್ಯದ ಸಮಸ್ಯೆ ಭಾದಿಸಲಿದೆ.

ವೃಷಭ : ಕೌಟುಂಬಿಕ ಕಲಹಗಳಲ್ಲಿ ಮೂಗು ತೂರಿಸಲು ಹೋಗಬೇಡಿ. ಸಾಧ್ಯವಾದಷ್ಟು ಮೌನದಿಂದಲೇ ಇರಿ. ಉದ್ಯಮದಲ್ಲಿ ಲಾಭಕ್ಕಿಂತ ಹೆಚ್ಚು ಖರ್ಚು ತಲೆದೋರಲಿದೆ. ಗೃಹ ನಿರ್ಮಾಣ ಕಾರ್ಯಕ್ಕೆ ಮುಂದಾಗಲಿದ್ದೀರಿ. ಪುತ್ರಿಯಿಂದ ಶುಭವಾರ್ತೆ ಕೇಳಲಿದ್ದೀರಿ.

ಮಿಥುನ : ಯಾರನ್ನೇ ಆಗಲಿ ನಂಬುವ ಮುನ್ನ ನೂರು ಬಾರಿ ಯೋಚನೆ ಮಾಡಿ. ನಂಬಿ ಮೋಸ ಹೋಗುವ ಮುನ್ನ ಎಚ್ಚರಿಕೆಯಿಂದ ಇರೋದು ಒಳಿತು. ಆರೋಗ್ಯದ ಕಡೆಗೆ ಕಾಳಜಿ ವಹಿಸಿ. ಮೊಣಕಾಲು ನೋವಿನ ಸಮಸ್ಯೆಯಿಂದ ಬಳಲಲಿದ್ದೀರಿ. ಹೀಗಾಗಿ ಯಾವುದೇ ಪ್ರಯಾಣ ಬೇಡ.

ಕಟಕ : ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ವಾಹನಗಳನ್ನು ಚಲಾಯಿಸುವಾಗ ಎಚ್ಚರಿಕೆಯಿಂದಿರಿ. ದಾಖಲೆ ಪತ್ರಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಕಳೆದು ಹೋಗುವ ಸಾಧ್ಯತೆ ಹೆಚ್ಚಿದೆ. ಪ್ರಾಣಿಗಳಿಂದ ಎಚ್ಚರಿಕೆಯಿಂದಿರಿ. ತರಕಾರಿ ಹಾಗೂ ಹಣ್ಣಿನ ವ್ಯಾಪಾರಿಗಳಿಗೆ ಶುಭ ಸುದ್ದಿ ಕಾದಿದೆ.

ಸಿಂಹ : ವ್ಯವಹಾರದಲ್ಲಿ ಇಂದು ಲಾಭವು ನಿಮ್ಮ ಪಾಲಾಗಲಿದೆ. ದಾಂಪತ್ಯ ಜೀವನದಲ್ಲಿದ್ದ ಕಲಹವು ದೂರಾಗಲಿದೆ. ಇದರಿಂದ ನೆಮ್ಮದಿ ನೆಲೆಸಲಿದೆ. ದೇವರನ್ನು ಪ್ರಾರ್ಥಿಸಿ. ಯಾವುದೇ ಕೆಲಸಕ್ಕೆ ಕೈ ಹಾಕುವ ಮುನ್ನ ನೂರು ಬಾರಿ ಯೋಚನೆ ಮಾಡಿ.

ಕನ್ಯಾ : ಕಚೇರಿ ಕೆಲಸದಲ್ಲಿ ನೆಮ್ಮದಿ ಇದೆ. ಮೇಲಾಧಿಕಾರಿಗಳು ನಿಮ್ಮ ಕೆಲಸಕ್ಕೆ ಪ್ರಶಂಸೆ ಸೂಚಿಸುತ್ತಾರೆ. ವೈವಾಹಿಕ ಸಂಬಂಧಕ್ಕೆ ಹುಡುಕುತ್ತಿರುವ ಯುವತಿಯರು ಗಣಪತಿ ದೇವರನ್ನು ಆರಾಧಿಸಿ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇದೆ.

ತುಲಾ : ಮನಸ್ಸು ಸದಾ ಚಂಚಲವಾಗಿಡಬೇಡಿ. ಇದರಿಂದ ಸೂಕ್ತ ನಿರ್ಧಾರ ಕೈಗೊಳ್ಳಲು ಸಾಧ್ಯವಾಗೋದಿಲ್ಲ. ಎಲ್ಲವೂ ನಾನು ಹೇಳಿದಂತೆ ನಡೆಯಬೇಕು ಎಂಬ ಮನೋಭಾವನೆ ಬೇಡವೇ ಬೇಡ.

ವೃಶ್ಚಿಕ : ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಪೋಷಕರ ಮಾತನ್ನು ಕೇಳಿ. ದುರ್ಗಾ ಆರಾಧನೆ ಮಾಡುವುದರಿಂದ ಕಷ್ಟ ಪರಿಹಾರವಾಗಲಿದೆ. ಸಂಗಾತಿಯಿಂದ ಉತ್ತಮ ಉಡುಗೊರೆಯನ್ನು ಪಡೆಯಲಿದ್ದೀರಿ. ಮಕ್ಕಳಿಂದ ಶುಭ ವಾರ್ತೆ ಕೇಳುತ್ತೀರಿ.

ಧನು : ರೈತರಿಗೆ ನಷ್ಟ ಕಾದಿದೆ. ಆದರೆ ದೃತಿಗೆಡಬೇಡಿ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ನಿಮ್ಮ ಪರವಾಗಿ ಇರಲಿದೆ. ಆರೋಗ್ಯ ಹಾಗೂ ವ್ಯಾಪಾರದಲ್ಲಿ ಕಾಳಜಿ ಇರಲಿ. ಶಿವನ ಆರಾಧನೆ ಮಾಡಿ.

ಮಕರ : ದುರ್ಗೆಗೆ ದೀಪ ನಮಸ್ಕಾರ ಮಾಡೋದ್ರಿಂದ ನಿಮ್ಮ ಕಷ್ಟ ಪರಿಹಾರವಾಗಲಿದೆ. ಕುಲದೇವತೆಯ ಸ್ಥಾನಕ್ಕೆ ಭೇಟಿ ನೀಡಲಿದ್ದೀರಿ. ಪೋಷಕರ ಆರೋಗ್ಯದ ಕಡೆಗೆ ಜಾಗ್ರತೆ ಇರಲಿ. ಪಿತ್ರಾರ್ಜಿತ ಆಸ್ತಿಯಲ್ಲಿ ಸಮನಾದ ಪಾಲು ಸಿಗಲಿದೆ.

ಕುಂಭ : ಇಷ್ಟು ದಿನಗಳಿಂದ ನಿಮ್ಮನ್ನು ಕಾಡುತ್ತಿರುವ ಸಮಸ್ಯೆ ದೂರಾಗಲಿದೆ. ಹಿತಶತ್ರುಗಳ ಕಾಟ ನಿಮ್ಮನ್ನು ಭಾದಿಸೋದಿಲ್ಲ. ಶಾಂತಿ -ನೆಮ್ಮದಿಯನ್ನು ಕಾಣಲಿದ್ದೀರಿ.

ಮೀನ : ಮನೆಯಲ್ಲಿ ಆಭರಣ ಖರೀದಿ ಮಾಡಲಿದ್ದೀರಿ. ಮನೆಯಲ್ಲಿ ಶುಭಕಾರ್ಯ ನಡೆಯಲಿದೆ. ಅಹಂಕಾರದ ಸ್ವಭಾವವನ್ನು ಬಿಟ್ಟು ಬಿಡಿ. ದೇವರ ಆರಾಧನೆಯಿಂದ ಕಷ್ಟ ಪರಿಹಾರವಾಗಲಿದೆ. ವ್ಯಾಪಾರದಲ್ಲಿ ನಷ್ಟ ಸಂಭವವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...