![](https://kannadadunia.com/wp-content/uploads/2024/05/b9b1ffa2-c800-4a71-9246-5d632b64083b-1024x775.jpg)
ಗುರುದತ್ತ ಗಾಣಿಗ ನಿರ್ದೇಶನದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಬಹು ನಿರೀಕ್ಷಿತ ಕರಾವಳಿ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇನ್ನೇನು ತೆರೆ ಮೇಲೆ ಬರಲು ಸಜ್ಜಾಗಿದೆ. ಕರಾವಳಿ ಚಿತ್ರತಂಡ ನಿನ್ನೆ ಖಳನಾಯಕನನ್ನು ಪರಿಚಯಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು. ಇದೀಗ ಖಳನಾಯಕನ ಪಾತ್ರವನ್ನು ರಿವೀಲ್ ಮಾಡಿದೆ. ಶಿಥಿಲ್ ಪೂಜಾರಿ ಈ ಸಿನಿಮಾದಲ್ಲಿ ವಾಲಿ ಎಂಬ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷದ ಕುರಿತ ಈ ಚಿತ್ರವನ್ನು ಗುರುದತ್ತ ಗಾಣಿಗ ಅವರೇ ತಮ್ಮ ಗುರುದತ್ತ ಗಾಣಿಗ ಫಿಲಂ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದು, ಪ್ರಜ್ವಲ್ ದೇವರಾಜ್ ಅವರಿಗೆ ಜೋಡಿಯಾಗಿ ಸಂಪದಾ ಅಭಿನಯಿಸಿದ್ದಾರೆ. ಮಿತ್ರ ಟಿವಿ ಶ್ರೀಧರ್, ಜಿ ಜಿ, ನಿರಂಜನ್ ಮತ್ತು ಶೀತಲ್ ಪೂಜಾರಿ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಸಚಿನ್ ಬಸ್ರೂರ್ ಸಂಗೀತ ಸಂಯೋಜನೆ ನೀಡಿದ್ದು, ಸದಾನಂದನ್ ಛಾಯಾಗ್ರಹಣ, ಪ್ರವೀಣ್ ಸಂಕಲನವಿದೆ.
![](https://kannadadunia.com/wp-content/uploads/2024/05/62f2cc45-c8b7-4a01-a082-52a006b5feb0-1-400x673.jpg)