alex Certify ಈ ರಾಶಿಯವರಿಗೆ ಇಂದು ಶುಭಕರವಾಗಿರಲಿದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಇಂದು ಶುಭಕರವಾಗಿರಲಿದೆ

ಮೇಷ : ನೀವು ಇಡೀ ದಿನವನ್ನು ಅತ್ಯಂತ ಸಂತೋಷದಿಂದ ಕಳೆಯಲಿದ್ದೀರಿ. ವ್ಯವಹಾರವನ್ನು ವಿಸ್ತರಿಸಲು ತಂದೆಯು ಆರ್ಥಿಕ ಸಹಾಯ ನೀಡಲಿದ್ದಾರೆ. ಅಂದುಕೊಂಡ ಕಾರ್ಯಗಳಲ್ಲಿ ಯಶಸ್ಸನ್ನು ಕಾಣಲಿದ್ದೀರಿ. ವಿದ್ಯಾರ್ಥಿಗಳಿಗೆ ಶುಭವಿದೆ.

ವೃಷಭ : ಕಚೇರಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಬಡ್ತಿಯ ಜೊತೆಯಲ್ಲಿ ವಿದೇಶ ಪ್ರಯಾಣದ ಭಾಗ್ಯ ಕೂಡ ಲಭಿಸುವ ಸಾಧ್ಯತೆ ಇದೆ. ಸಂಗಾತಿಯ ಅತಿಯಾದ ಖರ್ಚು ನಿಮ್ಮ ಜೇಬನ್ನು ಸುಡುತ್ತಿದೆ. ಆದಷ್ಟು ಹಣ ಉಳಿತಾಯ ಮಾಡುವ ಮಾರ್ಗ ಹುಡುಕಿಕೊಳ್ಳಿ.

ಮಿಥುನ : ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ಅವಕಾಶ ಲಭಿಸಲಿದೆ. ಪುತ್ರಿಗೆ ವೈವಾಹಿಕ ಸಂಬಂಧ ಕೂಡಿಬಾರದ ಹಿನ್ನೆಲೆಯಲ್ಲಿ ಅತಿಯಾಗಿ ಕೊರಗಲಿದ್ದೀರಿ. ಗಣೇಶನನ್ನು ಆರಾಧಿಸಿ. ಎಲ್ಲವೂ ಒಳಿತಾಗಲಿದೆ.

ಕಟಕ : ಕಚೇರಿಯಲ್ಲಿ ನಿಮ್ಮ ಸ್ಪರ್ಧಿಯು ನಿಮ್ಮನ್ನು ಹಿಮ್ಮೆಟ್ಟಬಹುದು. ಹೀಗಾಗಿ ಮೈಯೆಲ್ಲ ಕಣ್ಣಾಗಿಸಿಕೊಂಡು ಕೆಲಸವನ್ನು ಮಾಡಿ. ಕೋರ್ಟ್​ ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ ಕಾದಿದೆ. ಔತಣ ಕೂಟದಲ್ಲಿ ಭಾಗಿಯಾಗಲಿದ್ದೀರಿ. ಮಕ್ಕಳು ಸಾಧನೆ ಮಾಡಲಿದ್ದಾರೆ.

ಸಿಂಹ : ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಲಿದ್ದಾರೆ. ಮಕ್ಕಳ ಓದಿಗಾಗಿ ಅತಿಯಾದ ಖರ್ಚು ಮಾಡಬೇಕಾಗಿ ಬರಬಹುದು. ಪೋಷಕರ ಆರೋಗ್ಯದಲ್ಲಿ ಏರುಪೇರು ಉಂಟಾಗುವು ಸಾಧ್ಯತೆ ಇದೆ. ಸ್ನೇಹಿತರ ಜೊತೆ ಉತ್ತಮ ಸಮಯ ಕಳೆಯಲಿದ್ದೀರಿ.

ಕನ್ಯಾ : ತಾಯಿಯು ನಿಮ್ಮ ಹೊಸ ಯೋಜನೆಗಳಿಗೆ ಬೆಂಬಲ ನೀಡಲಿದ್ದಾರೆ. ಇದು ನಿಮಗೆ ಹತ್ತಾನೆಯ ಬಲವನ್ನು ತಂದುಕೊಡಲಿದೆ. ಓದಿನಲ್ಲಿ ಮಕ್ಕಳ ಪ್ರಗತಿಯು ನಿಮಗೆ ಹೆಮ್ಮೆ ಎನಿಸಲಿದೆ. ಆರ್ಥಿಕವಾಗಿ ಇಂದು ಕೊಂಚ ಕಷ್ಟ ಎದುರಾದೀತು.

ತುಲಾ : ಉದ್ಯಮದಲ್ಲಿ ಏಳ್ಗೆ ಕಾಣುತ್ತಿಲ್ಲ ಎಂದು ಕೊರಗಬೇಡಿ. ಹೊಸ ವರ್ಷದಿಂದ ನಿಮ್ಮ ಅದೃಷ್ಟ ಖುಲಾಯಿಸಲಿದೆ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ಜರುಗಲಿದೆ. ಅಪರಿಚಿತ ವ್ಯಕ್ತಿಯ ಭೇಟಿಯು ಲಾಭ ತಂದುಕೊಡಲಿದೆ.

ವೃಶ್ಚಿಕ : ಸ್ನೇಹಿತರ ಜೊತೆ ಹಣಕಾಸಿನ ವಿಚಾರಕ್ಕೆ ಉಂಟಾದ ವೈಮನಸ್ಯವು ಶಮನವಾಗಲಿದೆ. ಅತ್ತೆ – ಸೊಸೆ ನಡುವೆ ಕಲಹ ಉಂಟಾಗುವ ಸಾಧ್ಯತೆ ಇದೆ. ಇದರಿಂದ ಇಡೀ ಮನೆಯ ನೆಮ್ಮದಿ ಹಾಳಾಗಲಿದೆ. ಹಣ್ಣಿನ ವ್ಯಾಪಾರಿಗಳಿಗೆ ವಿಶೇಷ ಲಾಭವಿದೆ.

ಧನು : ಮಕ್ಕಳು ಅನಾರೋಗ್ಯಕ್ಕೀಡಾಗಲಿದ್ದಾರೆ. ಆದರೆ ಚಿಂತೆ ಬೇಡ. ಮನೆ ಮದ್ದಿನ ಮೂಲಕವೇ ನೀವಿದಕ್ಕೆ ಪರಿಹಾರ ನೀಡಬಹುದು. ಕಲಾವಿದರಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ. ಕಂಕಣ ಭಾಗ್ಯ ಕಾದಿದೆ.

ಮಕರ : ಮನೆಯಲ್ಲಿ ಆರ್ಥಿಕ ಪರಿಸ್ಥಿತಿಯು ಸುಧಾರಿಸಲಿದೆ. ಸಂಗಾತಿಯು ಹೊಸ ಕೆಲಸವನ್ನು ಹುಡುಕಿಕೊಳ್ಳಲಿದ್ದಾರೆ. ನಿಮಗಿಂತ ಕೆಳ ಹುದ್ದೆಯವರ ಮೇಲೆ ದರ್ಪ ತೋರಬೇಡಿ. ವಾಹನ ಖರೀದಿ ಸಾಧ್ಯತೆ ಇದೆ.

ಕುಂಭ : ಶುಭ ಕಾರ್ಯಗಳಿಗಾಗಿ ಖರ್ಚು ಮಾಡಬೇಕಾಗಿ ಬರಬಹುದು. ಯಾವುದೇ ಸಂದರ್ಭದಲ್ಲಿಯೂ ಮಾತಿನ ಮೇಲಿನ ಹಿಡಿತ ಕಳೆದುಕೊಳ್ಳಬೇಡಿ. ನಿಮ್ಮ ಬಹು ದಿನಗಳ ಕನಸೊಂದು ನನಸಾಗಲಿದೆ.

ಮೀನ : ಕ್ಷುಲ್ಲಕ ಕಾರಣಕ್ಕೆ ನೆರೆಮನೆಯವರ ಜೊತೆ ಜಗಳ ಆಗಬಹುದು.  ಕಚೇರಿ ಕೆಲಸದ ನಿಮಿತ್ತ ದೂರದ ಊರಿಗೆ ಪ್ರಯಾಣ ಬೆಳೆಸಲಿದ್ದೀರಿ. ದರ್ಜಿ, ಪಿಗ್ಮಿ ಹಾಗೂ ಶಿಕ್ಷಕ ವೃತ್ತಿಯಲ್ಲಿರುವವರಿಗೆ ಈ ದಿನ ಶುಭಕರವಾಗಿದೆ. ವ್ಯಾಪಾರ ವ್ಯವಹಾರಗಳಲ್ಲಿ ಲಾಭ ಕಾದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...