![ಇಂದು ಬಿಡುಗಡೆಯಾಗಲಿದೆ ಮೂರನೇ ಕೃಷ್ಣಪ್ಪ ಚಿತ್ರದ ಟ್ರೈಲರ್ | Kannada Dunia | Kannada News | Karnataka News | India News](https://i0.wp.com/publictv.in/wp-content/uploads/2023/12/moorane-krishnappa-.jpg?fit=800%2C450&ssl=1)
ನವೀನ್ ನಾರಾಯಣಘಟ್ಟ ನಿರ್ದೇಶನದ ‘ಮೂರನೇ ಕೃಷ್ಣಪ್ಪ’ ಚಿತ್ರ ಮೊನ್ನೆಯಷ್ಟೇ ರಾಜ್ಯಾದ್ಯಂತ ತೆರೆ ಕಂಡಿದ್ದು, ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ರಾಜಕಾರಣಿಗಳ ಕುರಿತ ಕಥೆ ಇದಾಗಿದ್ದು, ರಂಗಾಯಣ ರಘು ಮತ್ತು ಸಂಪತ್ ಮೈತ್ರಿಯ ಅವರ ನಟನೆಗೆ ಪ್ರೇಕ್ಷಕ ಪ್ರಭುಗಳು ಫಿದಾ ಆಗಿದ್ದಾರೆ.
ಹಳ್ಳಿ ಸೊಗಡಿನ ಈ ಚಿತ್ರವನ್ನು ರೆಡ್ ಡ್ರ್ಯಾಗನ್ ಫಿಲಂ ಬ್ಯಾನರ್ ನಲ್ಲಿ ಮೋಹನ್ ರೆಡ್ಡಿ ಮತ್ತು ಜಿ ರವಿಶಂಕರ್ ನಿರ್ಮಾಣ ಮಾಡಿದ್ದು, ಸಂಪತ್ ಮೈತ್ರಿಯ ಸೇರಿದಂತೆ ರಂಗಾಯಣ ರಘು, ಶ್ರೀಪ್ರಿಯಾ, ತುಕಾಲಿ ಸಂತು, ಅರೋಹಿ, ಮತ್ತು ಉಗ್ರಂ ಮಂಜು ತೆರೆ ಹಂಚಿಕೊಂಡಿದ್ದಾರೆ.
ಆನಂದ್ ರಾಜ ವಿಕ್ರಂ ಮತ್ತು ಸುಪ್ರೀತ್ ಶರ್ಮಾ ಸಂಗೀತ ಸಂಯೋಜನೆ ನೀಡಿದ್ದು, ಶ್ರೀಕಾಂತ್ ಸಂಕಲನ ಮತ್ತು ಯೋಗಿ ಛಾಯಾಗ್ರಹಣವಿದೆ.