alex Certify ಸಚಿವ ʼಮಾಸ್ಕ್‌ʼ ಹಾಕಿಕೊಂಡಿದ್ದೆಲ್ಲಿಗೆ ಅಂತ ತಿಳಿದ್ರೆ ಶಾಕ್‌ ಆಗ್ತೀರಾ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಚಿವ ʼಮಾಸ್ಕ್‌ʼ ಹಾಕಿಕೊಂಡಿದ್ದೆಲ್ಲಿಗೆ ಅಂತ ತಿಳಿದ್ರೆ ಶಾಕ್‌ ಆಗ್ತೀರಾ….!

ಉತ್ತರಾಖಂಡ್​ ಸಚಿವ ಸ್ವಾಮಿ ಯತೀಶ್ವರಾನಂದ ತಮ್ಮ ಕಾಲಿನ ಹೆಬ್ಬೆರಳಿಗೆ ಮಾಸ್ಕ್​ ಸಿಕ್ಕಿಸಿಕೊಂಡಿರುವ ಫೋಟೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.

ಫೋಟೋದಲ್ಲಿ ಉತ್ತರಾಖಂಡ್​ ಬಿಜೆಪಿ ಸರ್ಕಾರದ ಕೈಗಾರಿಕಾ ಸಚಿವ ಅಧಿಕೃತ ಸಭೆಯಲ್ಲಿ ಭಾಗವಹಿಸಿರೋದನ್ನ ಕಾಣಬಹುದಾಗಿದೆ. ಈ ಸಭೆಯು ಯಾವಾಗ ಹಾಗೂ ಎಲ್ಲಿ ನಡೆದಿದೆ ಅನ್ನೋದಕ್ಕೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಕೊಠಡಿಯೊಂದರಲ್ಲಿ ನಡೆಯುತ್ತಿರುವ ಸಭೆಯಲ್ಲಿ ಯತೀಶ್ವರಾನಂದರಾಗಲಿ ಅಥವಾ ಇನ್ನಿಬ್ಬರು ಸಚಿವರಾದ ಬಿಶನ್​ ಸಿಂಗ್​ ಚುಫಾಲ್, ಸುಬೋಧ್​ ಯುನಿಯಾಲ್​ ಹಾಗೂ ಪಕ್ಷದ ಇತರೆ ಯಾವುದೇ ಮುಖಂಡರಾಗಲಿ ಮಾಸ್ಕ್ ಧರಿಸಿದ್ದು ಫೋಟೋದಲ್ಲಂತೂ ಕಂಡು ಬಂದಿಲ್ಲ.

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಫೋಟೋದಲ್ಲಿ ಸಚಿವ ಯತೀಶ್ವರಾನಂದ ತಮ್ಮ ಕಾಲಿನ ಹೆಬ್ಬೆರಳಿಗೆ ಸರ್ಜಿಕಲ್​ ಮಾಸ್ಕ್​ ಸಿಕ್ಕಿಸಿಕೊಂಡಿದ್ದಾರೆ.

ತೆರಿಗೆ ಪಾವತಿದಾರರಿಗೆ ಗುಡ್‌ ನ್ಯೂಸ್: ಅಂಚೆ ಕಚೇರಿಯಲ್ಲೇ ರಿಟರ್ನ್ಸ್ ಸಲ್ಲಿಸಲು ಅವಕಾಶ

ಡೆಲ್ಟಾ ರೂಪಾಂತರಿ ವೈರಸ್​ ಹಾಗೂ ಕೊರೊನಾ ಮೂರನೇ ಅಲೆಯಿಂದ ಪಾರಾಗಲು ಯಾವ ರೀತಿಯಲ್ಲಿ ಮಾಸ್ಕ್​ ಧರಿಸಬೇಕು ಅನ್ನೋದು ಉತ್ತರಾಖಂಡ್​ ಸಚಿವ ಹಾಗೂ ಬಿಜೆಪಿ ನಾಯಕ ಯತೀಶ್ವರಾನಂದ ತೋರಿಸಿಕೊಟ್ಟಿದ್ದಾರೆ ಎಂದು ಟ್ವಿಟರ್​ನಲ್ಲಿ ಟೀಕಿಸಲಾಗಿದೆ.

ಇಷ್ಟೊಂದು ವೈಜ್ಞಾನಿಕವಾಗಿ ಮಾಸ್ಕ್​ ಧರಿಸೋಕೆ ಇನ್ಯಾರಿಗೂ ಗೊತ್ತಿರೋಕೆ ಸಾಧ್ಯವೇ ಇಲ್ಲ ಎಂದು ಅನೇಕರು ವ್ಯಂಗ್ಯ ಮಾಡಿದ್ದಾರೆ.

ಇತ್ತ ಉತ್ತರಾಖಂಡ್ ಕಾಂಗ್ರೆಸ್​ ವಕ್ತಾರೆ ಗರೀಮಾ ದಸೌನಿ ಕೂಡ ಸಚಿವರ ವಿರುದ್ಧ ಹರಿಹಾಯ್ದಿದ್ದು, ಸೋಂಕನ್ನ ತಡೆಯುವಲ್ಲಿ ಸಚಿವರು ಹಾಗೂ ಬಿಜೆಪಿ ನಾಯಕರು ಎಷ್ಟು ಗಂಭೀರವಾಗಿದ್ದಾರೆ ಅನ್ನೋದನ್ನ ಈ ಫೋಟೋ ತೋರಿಸುತ್ತಿದೆ. ಜನರಿಗೆ ಮಾಸ್ಕ್ ಧರಿಸಿ ಎಂದು ಹೇಳುವ ಇವರು ಮಾಡೋದು ಇಂತ ಕೆಲಸ ಎಂದು ಲೇವಡಿ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...