alex Certify ತನ್ನ ಮೇಲಾದ ಹಲ್ಲೆ ಕುರಿತು ಮೌನ ಮುರಿದ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ಮೇಲಾದ ಹಲ್ಲೆ ಕುರಿತು ಮೌನ ಮುರಿದ ನಟಿ

ತನ್ನ ಮೇಲಾದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಆಗಿರುವ ಬೆಳವಣಿಗೆಗಳ ಬಗ್ಗೆ, ಮಲಯಾಳಂ ನಟಿ ಸಾಮಾಜಿಕ‌ ಮಾಧ್ಯಮದಲ್ಲಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಕಷ್ಟದ ಸಮಯದಲ್ಲಿ ತನ್ನೊಂದಿಗೆ ನಿಂತ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ಜೊತೆಗೆ ಮತ್ತೆ ಯಾರಿಗೂ ಇಂತಹ ಅಗ್ನಿ ಪರೀಕ್ಷೆ ಅಥವಾ ಕಷ್ಟಕ್ಕೆ ಒಳಗಾಗದಂತೆ ನೋಡಿಕೊಳ್ಳಲು ಪ್ರಯತ್ನಿಸಬೇಕು ಎಂದಿದ್ದಾರೆ.

ಇದು ಸುಲಭದ ಪ್ರಯಾಣವಲ್ಲ, ವಿಕ್ಟಿಮ್ ಮನಸ್ಥಿತಿಯಿಂದ ಇದನ್ನ ನಾನು ಎದುರಿಸಬಲ್ಲೆ ಎಂಬ ಧೈರ್ಯ ಒಗ್ಗೂಡಿಸಿಕೊಂಡ ಪ್ರಯಾಣ ಕಷ್ಟಕರವಾಗಿತ್ತು. ಈ ಘಟನೆ ನಡೆದು 5 ವರ್ಷಗಳಾಗಿದೆ. ಈವರೆಗೂ ನನ್ನ ಹೆಸರು ಮತ್ತು ನನ್ನ ಗುರುತನ್ನ ಹಲವು ಕಾರಣಗಳಿಂದ ಮುಚ್ಚಿಡಲಾಗಿದೆ.

ನಾನು ಯಾವುದೇ ಅಪರಾಧ ಮಾಡದಿದ್ದರೂ, ನನ್ನನ್ನು ಅವಮಾನಿಸುವ, ಮೌನವಾಗಿಸುವ, ಒಂಟಿಯಾಗಿಸುವ ಅನೇಕ ಪ್ರಯತ್ನಗಳು ನಡೆದಿವೆ. ಆದರೆ ಅಂತಹ ಸಮಯದಲ್ಲಿ, ನನ್ನ ಧ್ವನಿಯನ್ನು ತುಳಿಯಲು ಬಿಡದೆ, ನನ್ನ ಧ್ವನಿಗೆ ಧ್ವನಿಯಾಗಿ ನನ್ನ ಜೊತೆ ಕೆಲವರು ನಿಂತಿದ್ದಾರೆ. ಈಗ ಅನೇಕರು ನನ್ನ ಪರವಾಗಿ ಮಾತನಾಡುವುದನ್ನು ಕೇಳಿದಾಗ, ಈ ಹೋರಾಟದಲ್ಲಿ ನಾನು ಒಬ್ಬಂಟಿಯಾಗಿಲ್ಲ ಎಂದು ನನಗೆ ತಿಳಿದಿದೆ.

ನ್ಯಾಯವು ಮೇಲುಗೈ ಸಾಧಿಸಲು, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಲು ಮತ್ತು ಬೇರೆ ಯಾರೂ ಅಂತಹ ಅಗ್ನಿಪರೀಕ್ಷೆಗೆ ಒಳಗಾಗದಂತೆ ನೋಡಿಕೊಳ್ಳಲು, ನಾನು ಈ ಪ್ರಯಾಣವನ್ನು ಮುಂದುವರಿಸುತ್ತೇನೆ. ನನ್ನೊಂದಿಗೆ ನಿಂತಿರುವ ಎಲ್ಲರಿಗೂ ಪ್ರೀತಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ನಟಿ ಪೋಸ್ಟ್ ಮಾಡಿದ್ದಾರೆ.

ನಿರ್ದೇಶಕ ಬಾಲಚಂದ್ರ ಕುಮಾರ್ ಆರೋಪಿ ನಟ ದಿಲೀಪ್ ವಿರುದ್ಧ ಹೇಳಿಕೆ ನೀಡಿದ್ದರು. ಸಧ್ಯ ದಿಲೀಪ್ ಹಾಗೂ ಆತನ ಸಹಚರರ ವಿರುದ್ಧ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಎಫ್ಐಆರ್ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...