alex Certify ಛತ್ತೀಸ್‌ಗಢದಲ್ಲಿ ಹೆಚ್ಚಾದ ನಕ್ಸಲರ ಹಾವಳಿ, ಒಂದೇ ವಾರದಲ್ಲಿ ಐದು ಜನರ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಛತ್ತೀಸ್‌ಗಢದಲ್ಲಿ ಹೆಚ್ಚಾದ ನಕ್ಸಲರ ಹಾವಳಿ, ಒಂದೇ ವಾರದಲ್ಲಿ ಐದು ಜನರ ಹತ್ಯೆ

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು 50 ವರ್ಷದ ಗ್ರಾಮಸ್ಥನನ್ನು ಥಳಿಸಿ, ಭೀಕರವಾಗಿ ಕೊಂದಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಒಂದೇ ವಾರದಲ್ಲಿ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಮಾಡಿರುವ ಐದನೇ ಹತ್ಯೆ ಇದಾಗಿದೆ.

ಈ ಘಟನೆ ಮಂಗಳವಾರ ಮಧ್ಯರಾತ್ರಿ ಕುಟ್ರು ಪೊಲೀಸ್ ಠಾಣಾ ವ್ಯಾಪ್ತಿಯ ಕೆತುಲ್ನಾರ್ ಗ್ರಾಮದಲ್ಲಿ ನಡೆದಿದೆ ಎಂದು ಇನ್ಸ್‌ಪೆಕ್ಟರ್ ಜನರಲ್ ಸುಂದರರಾಜ್ ಪಿ ತಿಳಿಸಿದ್ದಾರೆ.

ನಕ್ಸಲರಿಂದ ಹತ್ಯೆಯಾಗಿರುವ ಐವತ್ತು ವರ್ಷದ ಗ್ರಾಮಸ್ಥನನ್ನ ಜಗತ್ ಸೋಡಿ ಎಂದು ಗುರುತಿಸಲಾಗಿದೆ. ಮೃತ ದುರ್ದೈವಿ ಸಣ್ಣ ದಿನಸಿ ಅಂಗಡಿಯನ್ನು ನಡೆಸುತ್ತಿದ್ದ, ಅವರನ್ನ ಹಿಡಿದುಕೊಂಡು ಅಪರಿಚಿತ ನಕ್ಸಲರ ಗುಂಪೊಂದು ಹೊಡೆದು ಕೊಂದಿದೆ ಎಂದು ಮಾಹಿತಿ ನೀಡಿರುವ ಪೊಲೀಸರು, ಹತ್ಯೆಯ ಹಿಂದಿನ ಯಾವುದೇ ಉದ್ದೇಶವನ್ನು ಬಹಿರಂಗಪಡಿಸಿಲ್ಲ.

ಕೃತ್ಯ ನಡೆದ ಸ್ಥಳದಲ್ಲಿ ತನಿಖೆ ನಡೆಸಿದ ನಂತರ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಒಂದು ವಾರದಲ್ಲಿ, ಬಸ್ತಾರ್ ವಿಭಾಗದ ಅಡಿಯಲ್ಲಿ ಬರುವ ಬಿಜಾಪುರ ಜಿಲ್ಲೆಯಲ್ಲಿ, ನಕ್ಸಲರು ತಮ್ಮ ಇಬ್ಬರು ಸಹಚರರು, ಮೂವರು ನಾಗರಿಕರು ಸೇರಿದಂತೆ ಐವರನ್ನು ಕೊಂದಿದ್ದಾರೆ. ಇದಕ್ಕೂ ಮೊದಲು, 2020 ರಲ್ಲಿ ಬಸ್ತಾರ್ ವಿಭಾಗದಲ್ಲಿ ಕನಿಷ್ಠ 47 ಜನ, 2021 ರಲ್ಲಿ 34 ನಾಗರಿಕರನ್ನ ನಕ್ಸಲರು ಕೊಂದಿದ್ದಾರೆ. ಜೊತೆಗೆ ಈ ವಿಭಾಗದಲ್ಲಿ 2020 ರಲ್ಲಿ 40 ಮತ್ತು 2021 ರಲ್ಲಿ 51ಜನ ನಕ್ಸಲರನ್ನ ಗುಂಡಿಕ್ಕಿ ಕೊಂದಿದ್ದರು, ಇವರ ಕಾಟ ತಪ್ಪಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...