alex Certify ಬೆಂಗಳೂರಲ್ಲಿ ಬೆಚ್ಚಿಬೀಳಿಸುವ ಘಟನೆ: ಮಗಳಿಗೆ ಕಿರುಕುಳ ಕೊಡಬೇಡ ಎಂದಿದ್ದಕ್ಕೆ ತಂದೆಯ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಲ್ಲಿ ಬೆಚ್ಚಿಬೀಳಿಸುವ ಘಟನೆ: ಮಗಳಿಗೆ ಕಿರುಕುಳ ಕೊಡಬೇಡ ಎಂದಿದ್ದಕ್ಕೆ ತಂದೆಯ ಹತ್ಯೆ

ಬೆಂಗಳೂರು: ಮಗಳಿಗೆ ಕಿರುಕುಳ ಕೊಡಬೇಡ ಎಂದಿದ್ದಕ್ಕೆ ಬಾಲಕಿ ತಂದೆಯನ್ನು ಹತ್ಯೆ ಮಾಡಲಾಗಿದೆ. ಚಾಕುವಿನಿಂದ ಇರಿದು ಅನ್ವರ್ ಹುಸೇನ್ ಎಂಬುವರನ್ನು ಝಹೀದ್ ಹತ್ಯೆ ಮಾಡಿದ್ದಾನೆ.

ಅಪ್ರಾಪ್ತೆಗೆ ಪ್ರೀತಿಸುವಂತೆ ಝಹೀದ್ ಕಿರುಕುಳ ನೀಡುತ್ತಿದ್ದ. ಈ ವಿಚಾರವನ್ನು ಬಾಲಕಿ ತನ್ನ ತಂದೆ ಅನ್ವರ್ ಹುಸೇನ್ ಗೆ ತಿಳಿಸಿದ್ದಳು. ಅವರು ಕಳೆದ ಮೂರು ತಿಂಗಳ ಹಿಂದೆ ಝಹೀದ್ ಗೆ ಬುದ್ಧಿವಾದ ಹೇಳಿದ್ದರು. ನಿನ್ನೆ ಮತ್ತೆ ಬಾಲಕಿಯನ್ನು ಹಿಂಬಾಲಿಸಿದ ಝಹೀದ್ ಪ್ರೀತಿಸುವಂತೆ ಪೀಡಿಸಿದ್ದಾನೆ.

ನಿನ್ನೆ ರಾತ್ರಿ ಆರೋಪಿಗೆ ಬುದ್ಧಿವಾದ ಹೇಳಲು ಅನ್ವರ್ ಹೋಗಿದ್ದಾರೆ. ಝಹೀದ್ ಕುಟುಂಬದವರಿಗೂ ವಿಚಾರ ತಿಳಿಸಿದ್ದಾರೆ. ಆರೋಪಿಯ ಸಹೋದರ ಬಿಲಾಲ್ ಗೆ ಮಾಹಿತಿ ನೀಡಿದ್ದು, ಇದೇ ವೇಳೆ ಅನ್ವರ್ ಕುತ್ತಿಗೆಗೆ ಝಹೀದ್ ಚಾಕುವಿನಿಂದ ಇರಿದಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಅನ್ವರ್ ಸಾವು ಕಂಡಿದ್ದಾರೆ.

ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸಹೋದರ ಬಿಲಾಲ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಝಹೀದ್ ತಲೆಮರಿಸಿಕೊಂಡಿದ್ದು, ಹುಡುಕಾಟ ನಡೆಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...