alex Certify ಬೆಚ್ಚಿಬೀಳಿಸುವಂತಿದೆ ಸಾರ್ವಜನಿಕರ ಸಮ್ಮುಖದಲ್ಲೇ ನಡೆದಿರುವ ಬರ್ಬರ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಸಾರ್ವಜನಿಕರ ಸಮ್ಮುಖದಲ್ಲೇ ನಡೆದಿರುವ ಬರ್ಬರ ಹತ್ಯೆ

ಜನ‌ನಿಬಿಡ ಸ್ಥಳದಲ್ಲಿ ವ್ಯಕ್ತಿಯೊಬ್ಬನನ್ನು ಅಪಾಯಕಾರಿ ಆಯುಧದಿಂದ ಗುಂಪೊಂದು ಅಟ್ಟಾಡಿಸಿ ಹತ್ಯೆ ಮಾಡಿದ ವಿಡಿಯೋ ವೈರಲ್ ಆಗಿದ್ದು, ಪಂಜಾಬ್‌ನ ಮೋಗಾ ಜಿಲ್ಲೆಯ ಬದ್ನಿ ಕಲಾನ್ ಪ್ರದೇಶದ ಮಾರುಕಟ್ಟೆಯಲ್ಲಿ ಈ ದಾಳಿ ನಡೆದಿದೆ.

28 ವರ್ಷದ ವ್ಯಕ್ತಿಯನ್ನು ಸಾರ್ವಜನಿಕರ ಕಣ್ಣೆದುರೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆಯು ಸಿಸಿ ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಆರು ಜನರ ತಂಡ ದೇಸರಾಜ್ ಎಂಬಾತನನ್ನು ಮಾರುಕಟ್ಟೆಯಲ್ಲಿ ಅಟ್ಟಿಸಿಕೊಂಡು ಹೋಗುತ್ತಿರುವುದನ್ನು ಸಾರ್ವಜನಿಕರು ಗಮನಿಸಿದ್ದಾರೆ.
ದೇಸರಾಜ್ ಮೇಲೆ ಗುಂಪು ಕತ್ತಿ ಮತ್ತು ಇತರ ಹರಿತ ವಸ್ತುಗಳಿಂದ ಹಲ್ಲೆ ನಡೆಸಿದೆ. ಈ ವೇಳೆ ಅವನ ಕುತ್ತಿಗೆ, ಮುಖ ಮತ್ತು ಪಾದದ ಮೇಲೆ ಗಂಭೀರ ಗಾಯಗಳಾಗಿದೆ.

ಹಣ್ಣು ಕೊಯ್ಯುವ ದೇಸಿ ಟೆಕ್ನಿಕ್ ಗೆ ಉದ್ಯಮಿ ಆನಂದ್‌ ಮಹಿಂದ್ರಾ ಮೆಚ್ಚುಗೆ

ದಾಳಿಯ ನಂತರ, ದೇಸ್ರಾಜ್ ರಸ್ತೆಯಲ್ಲಿ ಬಿದ್ದಿದ್ದು, ಆ ಗುಂಪು ಓಡಿಹೋಗುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಕೆಲವು ದಿನಗಳ ಹಿಂದೆ ದಾಳಿಕೋರರ ನಡುವೆ ಸಣ್ಣ ವಾಗ್ವಾದ ನಡೆದಿತ್ತು. ಅವರು ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ದೇಸ್‌ರಾಜ್‌ನನ್ನು ಕೊಂದಿದ್ದಾರೆ ಎಂದು ಕುಟುಂಬ ಹೇಳಿಕೊಂಡಿದೆ.

ದಾಳಿಕೋರ ಆರು ಮಂದಿ ಎರಡು ಬೈಕ್‌ಗಳಲ್ಲಿ ಆಗಮಿಸಿ ಮಾರುಕಟ್ಟೆಯ ಮೂಲಕ ದೇಸರಾಜ್ ಅವರನ್ನು ಹಿಂಬಾಲಿಸಿದ್ದಾರೆ. ದೇಸ್‌ರಾಜ್ ಕಾಲ್ನಡಿಗೆಯಲ್ಲಿ ಮಾರುಕಟ್ಟೆ ಪ್ರವೇಶಿಸಿದ್ದ. ಆ ಗುಂಪು ತನ್ನ ಬಳಿಗೆ ಬರುತ್ತಿರುವುದನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸಿದರೂ ದುಷ್ಕರ್ಮಿಗಳು ಆಯುಧಗಳಿಂದ ಮೇಲಿಂದ ಮೇಲೆ ದಾಳಿ ನಡೆಸಿದ್ದಾರೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...