alex Certify ಹಲ್ಲುಜ್ಜದೇ ಮಗುವಿಗೆ ಮುತ್ತು ಕೊಡಲು ಬಿಡದಿದ್ದಕ್ಕೆ ಪತ್ನಿಯನ್ನೇ ಕೊಂದ ಪಾಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಲ್ಲುಜ್ಜದೇ ಮಗುವಿಗೆ ಮುತ್ತು ಕೊಡಲು ಬಿಡದಿದ್ದಕ್ಕೆ ಪತ್ನಿಯನ್ನೇ ಕೊಂದ ಪಾಪಿ

ಬಹುತೇಕ ಕೊಲೆ ಸೇರಿದಂತೆ ಇನ್ನಿತರೆ ಅಪರಾಧ ಪ್ರಕರಣಗಳಿಗೆ ಇಂತಹದ್ದೇ ಕಾರಣಗಳು ಬೇಕಿಲ್ಲ. ಕ್ಷುಲ್ಲಕ ಕಾರಣಕ್ಕೆ ಆರಂಭವಾಗುವ ಗಲಾಟೆಗಳು ಕೊಲೆಯಲ್ಲಿ ಅಂತ್ಯವಾಗುತ್ತವೆ.

ಇಂತಹದ್ದೇ ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಕೊಲೆಗೆ ಕಾರಣವಾಗಿದೆ. ಕೇರಳದ ಪಾಲಕ್ಕಾಡ್ ನಲ್ಲಿ ಬೆಳ್ಳಂಬೆಳಗ್ಗೆ ಎದ್ದ ತಂದೆ ಮಗುವಿಗೆ ಮುತ್ತು ನೀಡಲು ಮುಂದಾಗಿದ್ದಾನೆ. ಆದರೆ, ಹಲ್ಲುಜ್ಜಿಲ್ಲ ಎಂಬ ಕಾರಣದಿಂದ ಮಗುವಿಗೆ ಮುತ್ತು ಕೊಡಬೇಡಿ ಎಂದು ಪತ್ನಿ ಹೇಳಿದ್ದಾಳೆ. ಆದರೆ, ಈ ವಿಚಾರದಲ್ಲಿ ಜಗಳ ಆರಂಭವಾಗಿ, ಆ ಜಗಳ ತಾರಕಕ್ಕೇರಿ ಚಾಕುವಿನಿಂದ ಇರಿದು ಆಕೆಯನ್ನು ಕೊಲೆ ಮಾಡಿದ್ದಾನೆ.

BIG NEWS: ಬಿಜೆಪಿ ಮುಖಂಡ K.N. ಚಕ್ರಪಾಣಿ ವಿರುದ್ಧ FIR ದಾಖಲು

ಪತಿ-ಪತ್ನಿಯರಾದ ಅವಿನಾಶ್ ಮತ್ತು ದೀಪಿಕಾ ಇಬ್ಬರೂ ಮಂಗಳವಾರ ಮಗುವಿಗೆ ಮುತ್ತು ಕೊಡುವ ವಿಚಾರದಲ್ಲಿ ಬೆಳಗ್ಗೆ ಜೋರಾಗಿ ಮಾತಿನ ಚಕಮಕಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೋಪಗೊಂಡ ಅವಿನಾಶ್ ಚಾಕುವಿನಿಂದ ಇರಿದಿದ್ದಾನೆ. ನೋವಿನಿಂದ ನರಳುತ್ತಾ ಆಕೆ ಕೂಗಿಕೊಂಡಾಗ ನೆರೆಹೊರೆಯವರು ಆಕೆಯನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದಿಸಿದ್ದಾರೆ. ಆದರೆ, ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅವಿನಾಶ್ ನನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...