alex Certify ಪ್ರೀತಿ ನಿರಾಕರಿಸಿದಾಕೆಯ ಮೇಲಿನ ಸಿಟ್ಟಿಗೆ ಪ್ರಿಯತಮ ಮಾಡ್ದ ಇಂಥಾ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿ ನಿರಾಕರಿಸಿದಾಕೆಯ ಮೇಲಿನ ಸಿಟ್ಟಿಗೆ ಪ್ರಿಯತಮ ಮಾಡ್ದ ಇಂಥಾ ಕೆಲಸ

ಮಾಜಿ ಪ್ರಿಯಕರನಿಂದ ಜೀವ ಬೆದರಿಕೆ ಇದೆ ಎಂದು ಆರೋಪಿಸಿದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಾಜಿ ಪ್ರಿಯತಮ ವಿದ್ಯಾರ್ಥಿನಿಯ ಸ್ಕೂಟಿಯನ್ನು ಸುಟ್ಟು ಹಾಕಿದ್ದಾನೆ .

ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಸಂಜಯ್​ ಮೂರ್ತಿ ದೂರುದಾರ ವಿದ್ಯಾರ್ಥಿನಿಯನ್ನ ಪ್ರೀತಿಸುತ್ತಿದ್ದ. ಆದರೆ ಒಂದು ವರ್ಷದ ಹಿಂದೆ ಯುವತಿ ತನ್ನ ತಾಯಿ ಮದುವೆಗೆ ಒಪ್ಪುತ್ತಿಲ್ಲ ಎಂಬ ಕಾರಣ ನೀಡಿ ಬ್ರೇಕಪ್​ ಮಾಡಿಕೊಂಡಿದ್ದಳು.

ಆದರೆ ಪ್ರೀತಿಯನ್ನ ಕೊನೆಗಾಣಿಸುವ ನಿರ್ಧಾರಕ್ಕೆ ಸಂಜಯ್​ ಸುತಾರಾಂ ಒಪ್ಪಿರಲಿಲ್ಲ. ವಿದ್ಯಾರಣ್ಯಪುರದಲ್ಲಿರುವ ಮಾಜಿ ಗೆಳತಿಯ ನಿವಾಸಕ್ಕೆ ಜನವರಿ 12ರಂದು ಬಂದ ಸಂಜಯ್​, ಆಕೆ ಹಾಗೂ ಆಕೆಯ ತಾಯಿಗೆ ಜೀವ ಬೆದರಿಕೆಯನ್ನೊಡ್ಡಿದ. ಆದರೆ ಯುವತಿ ನಿನ್ನೊಂದಿಗೆ ಮಾತನಾಡಲೂ ನನಗೆ ಇಷ್ಟವಿಲ್ಲವೆಂದು ಹೇಳಿದ್ದಳು ಎನ್ನಲಾಗಿದೆ.

SHOCKING NEWS: ಮತ್ತೊಂದು ಪೈಶಾಚಿಕ ಕೃತ್ಯ, ಹುಡುಗಿ ಮೇಲೆ ಅತ್ಯಾಚಾರ -ತಂದೆ ಸೇರಿ ಮೂವರ ಹತ್ಯೆ

ಫೆಬ್ರವರಿ 2ನೇ ತಾರೀಖಿನಂದು ಯಾರೋ ದುಷ್ಕರ್ಮಿಗಳು ಆಕೆಯ ಸ್ಕೂಟಿಯನ್ನ ಸುಟ್ಟು ಹಾಕಿದ್ದಾರೆ. ಈ ಸಂಬಂಧ ಸಿಸಿ ಟಿವಿ ಪರಿಶೀಲಿಸಿದ ವೇಳೆ ಅದು ಸಂಜಯ್​ದೇ ಕೆಲಸ ಅನ್ನೋದು ತಿಳಿದು ಬಂದಿದೆ. ಹೀಗಾಗಿ ಯುವತಿ ಮಾಜಿ ಪ್ರಿಯಕರನ ವಿರುದ್ಧ ದೂರು ದಾಖಲಿಸಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...