alex Certify ಯಾವುದೋ ಕಾರಣಕ್ಕೆ ಮೃತಪಟ್ರೂ ಕೊರೊನಾ ಹಣೆಪಟ್ಟಿ: ಕೊರೊನಾ ಹಣ ಮಾಡಲು ಹಬ್ಬಿಸಿದ ಭೂತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾವುದೋ ಕಾರಣಕ್ಕೆ ಮೃತಪಟ್ರೂ ಕೊರೊನಾ ಹಣೆಪಟ್ಟಿ: ಕೊರೊನಾ ಹಣ ಮಾಡಲು ಹಬ್ಬಿಸಿದ ಭೂತ

ಕಾರವಾರ: ನೆರೆಮನೆಯವರು, ನಮ್ಮವರಿಗೂ ಕೊರೊನಾ ಬಂದರೆ ಹೆದರಬೇಕಿಲ್ಲ. ಕೊರೊನಾಗೆ ನಮ್ಮ ದೇಶದ ಔಷಧ ಸೂಕ್ತವಾದ ಮದ್ದು ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.

ಔಷಧ ಕಂಪನಿಗಳು ಲಾಬಿ ಮಾಡಿ ಹಣ ಗಳಿಸಲು ಕೊರೊನಾ ಭೂತ ಎಬ್ಬಿಸುತ್ತಿದ್ದಾರೆ. ಕೊರೊನಾದಿಂದ ಒಂದು ಪರ್ಸೆಂಟ್ ನಷ್ಟು ಜನರು ಸತ್ತಿಲ್ಲ. ಯಾವುದೋ ಕಾರಣದಿಂದ ಸತ್ತವರಿಗೆ ಕೊರೊನಾ ಹಣೆಪಟ್ಟಿ ಕಟ್ಟಲಾಗಿದೆ. ಕೊರೊನಾದಿಂದಲೇ ಸಾವನ್ನಪ್ಪಿದ್ದಾರೆ ಎಂದು ಹಬ್ಬಿಸಲಾಗುತ್ತಿದೆ. ಸಾಮಾಜಿಕ ಸ್ವಾಸ್ಥ್ಯ, ಶುಚಿತ್ವಕ್ಕೆ ಆದ್ಯತೆ ನೀಡುವ ಮೂಲಕ ದಿನನಿತ್ಯದ ಜೀವನದಲ್ಲಿ ನಾವು ಕೊರೊನಾ ಎದುರಿಸಬೇಕು ಎಂದು ತಿಳಿಸಿದ್ದಾರೆ.

ಜ್ವರ, ಶೀತವಾದ ಸಂದರ್ಭದಲ್ಲಿ ಪರೀಕ್ಷೆ ನಡೆಸಿದರೆ ಕೊರೊನಾ ಪಾಸಿಟಿವ್ ಎಂದೇ ಬರುತ್ತೆ. ಗಂಟಲು ದ್ರವ ಮಾದರಿ ಸಂಗ್ರಹಿಸಿ ಕೊರೊನಾ ವೈರಸ್ ಪತ್ತೆ ಹಚ್ಚುತ್ತೇವೆ ಎನ್ನುವುದು ಯಾವ ದೇಶಕ್ಕೂ ಸಾಧ್ಯವಾಗಿಲ್ಲ. ಕೊರೊನಾ ಕಾರಣದಿಂದ ಆರ್ಥಿಕ ಸ್ಥಿತಿ ಸಂಕಷ್ಟದಲ್ಲಿದೆ. ಜನರ ಕಾಳಜಿಯಿಂದ ಸರ್ಕಾರ ಲಾಕ್ಡೌನ್ ಜಾರಿಮಾಡಿತು. ಔಷಧ ಕಂಪನಿಗಳು ಲಾಬಿ ಮಾಡಿ ಹಣಗಳಿಸಲು ಕೊರೊನಾ ಭೂತ ಎಬ್ಬಿಸುತ್ತಿದ್ದಾರೆ ಎಂದು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಅನಂತ್ ಕುಮಾರ್ ಹೇಳಿದ್ದಾರೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...