alex Certify ‘ಬಿಗ್ ಬಾಸ್’ ಕಮಲ್ ಹಾಸನ್ ರಾಜಕೀಯಕ್ಕೆ ಅನರ್ಹ: ಸಿಎಂ ಪಳನಿಸ್ವಾಮಿ – ಅವರು ಶೋ ನೋಡಿದ್ದಕ್ಕೆ ಖುಷಿಯಾಯ್ತು: ಕಮಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬಿಗ್ ಬಾಸ್’ ಕಮಲ್ ಹಾಸನ್ ರಾಜಕೀಯಕ್ಕೆ ಅನರ್ಹ: ಸಿಎಂ ಪಳನಿಸ್ವಾಮಿ – ಅವರು ಶೋ ನೋಡಿದ್ದಕ್ಕೆ ಖುಷಿಯಾಯ್ತು: ಕಮಲ್

ಪೆರಂಬಲೂರು/ಅರಿಯಾಲೂರು: ನಟ ಕಮಲಹಾಸನ್ ‘ಬಿಗ್ ಬಾಸ್’ ಮತ್ತು ಸಿನಿಮಾ ಮೂಲಕ ಕುಟುಂಬಗಳನ್ನು ಹಾಳು ಮಾಡುತ್ತಿದ್ದಾರೆ ಎಂದು ತಮಿಳುನಾಡು ಸಿಎಂ ಎಡಪ್ಪಾಡಿ ಕೆ. ಪಳನಿಸ್ವಾಮಿ ಆರೋಪಿಸಿದ್ದಾರೆ.

ತಮ್ಮ ಸರ್ಕಾರವನ್ನು ಮಕ್ಕಳ್ ನೀದಿ ಮಯ್ಯುಂ ಪಕ್ಷದ ನಾಯಕ, ನಟ ಕಮಲಹಾಸನ್ ಟೀಕಿಸಿದ್ದಕ್ಕೆ ತಿರುಗೇಟು ನೀಡಿರುವ ಪಳನಿಸ್ವಾಮಿ ಅವರು, ಕಮಲಹಾಸನ್ ರಾಜಕೀಯಕ್ಕೆ ಅನರ್ಹ ಎಂದು ಟೀಕಿಸಿದ್ದಾರೆ.

ಎಂಜಿಆರ್ ಅವರ ಚಲನಚಿತ್ರಗಳು ಮತ್ತು ಹಾಡುಗಳಲ್ಲಿ ಉತ್ತಮ ಸಂದೇಶಗಳು ಇದ್ದವು ಎಂದು ತಮ್ಮ ಎಐಎಡಿಎಂಕೆ ಸಂಸ್ಥಾಪಕರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಪಳನಿಸ್ವಾಮಿ, ಕಮಲ್ ಹಾಸನ್ ವಿಷಯದಲ್ಲಿ ಹಾಗಿಲ್ಲ. ಅವರ ಸಿನಿಮಾ, ಟಿವಿ ಕಾರ್ಯಕ್ರಮಗಳು ಕುಟುಂಬಗಳನ್ನು ಹಾಳುಮಾಡುತ್ತಿವೆ ಎಂದು ದೂರಿದ್ದಾರೆ.

ಕಮಲ್ ಗೆ ಯಾವುದೇ ವೈಯಕ್ತಿಕ ಪ್ರಭಾವ ಇಲ್ಲದ ಕಾರಣ ಎಂಜಿಆರ್ ಹೆಸರಿನಲ್ಲಿ ಮತ ಗಳಿಸಲು ಪ್ರಯತ್ನಿಸುತ್ತಾರೆ. ‘ಬಿಗ್ ಬಾಸ್’ ಶೋನಿಂದ ಕುಟುಂಬವನ್ನು ಕಮಲಹಾಸನ್ ಹಾಳು ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಮಲ್, ಮುಖ್ಯಮಂತ್ರಿಗಳು ಕೂಡ ‘ಬಿಗ್ ಬಾಸ್’ ನೋಡುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...