alex Certify ರಸ್ತೆ ಹೊಂಡದಿಂದಾಗಿ ಮೋಟಾರ್ ಸೈಕಲ್‌ ನಿಂದ ಬಿದ್ದ ಸವಾರ ಬಸ್‌ ನಡಿ ಸಿಲುಕಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆ ಹೊಂಡದಿಂದಾಗಿ ಮೋಟಾರ್ ಸೈಕಲ್‌ ನಿಂದ ಬಿದ್ದ ಸವಾರ ಬಸ್‌ ನಡಿ ಸಿಲುಕಿ ಸಾವು

ದ್ವಿಚಕ್ರ ವಾಹನ‌ ಸವಾರರು ರಸ್ತೆ ಗುಂಡಿಯಿಂದ ಪ್ರಾಣ ಕಳೆದುಕೊಳ್ಳುವ ದುರಂತಗಳು ನಡೆಯುತ್ತಲೇ ಇದೆ. ಬೆಂಗಳೂರಿನಲ್ಲಿ ಪ್ರತಿ ವರ್ಷ ಇಂತಹ ಪ್ರಕರಣ ಮರುಕಳಿಸುತ್ತಲೇ ಇರುತ್ತವೆ.

ಇದೇ ರೀತಿ ಥಾಣೆ ಜಿಲ್ಲೆಯ ಡೊಂಬಿವಲಿ – ಕಲ್ಯಾಣ ಪ್ರದೇಶದಲ್ಲಿ ಮೋಟಾರ್‌ ಸೈಕಲ್ ಗುಂಡಿಗೆ ಬಿದ್ದಿದ್ದು, ಇದೇ ವೇಳೆ ಬಂದ ಬಸ್ ನಡಿ ಸಿಲುಕಿ ಸವಾರ ಅಂಕಿತ್ ಥೈವಾ (26) ಸಾವನ್ನಪ್ಪಿದ್ದಾರೆ.

ಅಂಬರನಾಥ್ ನಿವಾಸಿ ಅಂಕಿತ್ ಥೈವಾ ನವಿ ಮುಂಬೈನ ಘನ್ಸೋಲಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದಾಗ ಖೋನಿ ಗ್ರಾಮದ ಕಟೈ- ಬದ್ಲಾಪುರ ರಸ್ತೆಯಲ್ಲಿ ಈ ಘಟನೆ ನಡೆದಿದೆ.

ತನ್ನ ಮೋಟಾರು ಸೈಕಲ್ ಗುಂಡಿಗೆ ಇಳಿದಾಗ ನಿಯಂತ್ರಣ ಕಳೆದುಕೊಂಡಿದ್ದಾರೆ. ನಂತರ ದ್ವಿಚಕ್ರ ವಾಹನ ಮುನ್ಸಿಪಲ್ ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದಿದೆ.

ವಾಜಪೇಯಿ – ಅಡ್ವಾಣಿ ಅವರ ಕಾಲದ ಬಿಜೆಪಿ ಸತ್ತಿದೆ..! ಮೋದಿ ವಿರುದ್ದ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್‌ ಸಿನ್ಹಾ ಪರೋಕ್ಷ ವಾಗ್ದಾಳಿ

ಥಾಣೆಯಲ್ಲಿ ರಸ್ತೆಗಳನ್ನು ಗುಂಡಿಗಳಿಂದ ಮುಕ್ತಗೊಳಿಸುವಂತೆ ಸಿಎಂ ಏಕನಾಥ್ ಶಿಂಧೆ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ.

ಮೃತ ವ್ಯಕ್ತಿಯ ತಂದೆ‌ ನೀಡಿದ ದೂರಿನ ಮೇರೆಗೆ ಬಸ್ ಚಾಲಕನ ಮೇಲೆ ಅತಿವೇಗದ ಮತ್ತು ನಿರ್ಲಕ್ಷ್ಯದ ಚಾಲನೆ ಮಾಡಿದ ಪ್ರಕರಣ ದಾಖಲಾಗಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಡೊಂಬಿವಿಲಿಯ ಶಾಸ್ತ್ರಿನಗರ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಈ ತಿಂಗಳ ಆರಂಭದಲ್ಲಿ ಕಲ್ಯಾಣ್‌ನ ಇಬ್ಬರು ಹಿರಿಯ ನಾಗರಿಕರು ಗುಂಡಿಯಿದ್ದ ರಸ್ತೆಯಲ್ಲಿ ಬಿದ್ದು ಗಾಯಗೊಂಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...