alex Certify ವಾಜಪೇಯಿ – ಅಡ್ವಾಣಿ ಅವರ ಕಾಲದ ಬಿಜೆಪಿ ಸತ್ತಿದೆ..! ಮೋದಿ ವಿರುದ್ದ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್‌ ಸಿನ್ಹಾ ಪರೋಕ್ಷ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಜಪೇಯಿ – ಅಡ್ವಾಣಿ ಅವರ ಕಾಲದ ಬಿಜೆಪಿ ಸತ್ತಿದೆ..! ಮೋದಿ ವಿರುದ್ದ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್‌ ಸಿನ್ಹಾ ಪರೋಕ್ಷ ವಾಗ್ದಾಳಿ

ರಾಷ್ಟ್ರಪತಿ ಚುನಾವಣೆಗೆ ಮತದಾನ ಆರಂಭವಾಗಿದ್ದು, ಎಲ್ಲ ರಾಜ್ಯಗಳಲ್ಲಿ ಮತದಾನ ಆರಂಭವಾಗಿದೆ. ಈ ನಡುವೆ ಚುನಾವಣೆ ಪ್ರಚಾರದ ಕೊನೆ ಹಂತದಲ್ಲಿ ಅಭ್ಯರ್ಥಿ ಯಶವಂತ ಸಿನ್ಹಾ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ವಾಜಪೇಯಿ, ಅಡ್ವಾಣಿ ಅವರ ಬಿಜೆಪಿ ಸತ್ತಿದೆ, “ಆತ್ಮಸಾಕ್ಷಿಯ ಕರೆ”ಗೆ ಕಿವಿಗೊಡಿ ಎಂದು ಶಾಸಕರನ್ನು ಒತ್ತಾಯಿಸಿದ ವಿರೋಧ ಪಕ್ಷದ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ, ಬಿಜೆಪಿ ಸಂಸದರು ಮತ್ತು ಶಾಸಕರಲ್ಲಿ ಮತಗಳನ್ನು ಯಾಚಿಸಿದರು. ಪಕ್ಷವನ್ನು ಉಳಿಸಲು ಇದು ಅವರಿಗೆ “ಕೊನೆಯ ಅವಕಾಶ” ಎಂದು ಅವರು ಪ್ರತಿಪಾದಿಸಿದ್ದಾರೆ.

ರಾಷ್ಟ್ರಪತಿ ಚುನಾವಣೆಯಲ್ಲಿ 4,809 ಚುನಾಯಿತ ಸಂಸದರು ಮತ್ತು ಶಾಸಕರಿಗೆ ಅವರು ನೀಡಿದ ಎರಡು ಪುಟಗಳ ಮನವಿಯಲ್ಲಿ ಈ‌ ಕರೆ ಇದೆ. ಕಾಲೇಜಿನ ಚುನಾವಣೆಯಂತೆ ಇಬ್ಬರ ಗುರುತಿನ ಮೇಲೆ ಚುನಾವಣೆ ನಡೆಯುತ್ತಿಲ್ಲ. ಅಭ್ಯರ್ಥಿಗಳು ಅವರು ಪ್ರತಿನಿಧಿಸುವ ಸಿದ್ಧಾಂತಗಳು ಮತ್ತು ಆದರ್ಶಗಳ ಬಗ್ಗೆ ಚುನಾವಣೆ ನಡೆಯುತ್ತಿದೆ ಎಂದಿದ್ದಾರೆ.

ನನ್ನ ಸಿದ್ಧಾಂತವು ಭಾರತದ ಸಂವಿಧಾನವಾಗಿದೆ. ನನ್ನ ಪ್ರತಿಸ್ಪರ್ಧಿ ಅಭ್ಯರ್ಥಿ (ದ್ರೌಪದಿ ಮುರ್ಮು) ಅವರದ್ದು ಸಂವಿಧಾನವನ್ನು ಬದಲಾಯಿಸುವ ಸಿದ್ಧಾಂತ ಎಂದು ಕುಟುಕಿದ್ದಾರೆ.

ಎಬಿ ವಾಜಪೇಯಿ ಮತ್ತು ಎಲ್‌ಕೆ ಅಡ್ವಾಣಿ ನೇತೃತ್ವದಲ್ಲಿನ‌ ಬಿಜೆಪಿ ಸತ್ತಿದೆ ಎಂದು ಹೇಳಲು ನಾನು ವಿಷಾದಿಸುತ್ತೇನೆ. ಈಗಿನ ಏಕೈಕ ನಾಯಕನ ಅಡಿಯಲ್ಲಿ, ಇದು ಸಂಪೂರ್ಣ ವಿಭಿನ್ನವಾದ ಮತ್ತು ಅವನತಿಗೆ ಹೊಂದುತ್ತಿರುವ ಪಕ್ಷವಾಗಿದೆ ಎಂದು ವಿವರಿಸಿದ್ದಾರೆ. ಯಶವಂತ ಸಿನ್ಹಾ ಮಾತಿಗೆ ಎಷ್ಟು ಜನ ಪ್ರತಿನಿಧಿಗಳು ಕಿವಿಗೊಡುತ್ತಾರೆ ಎಂಬುದು ಕುತೂಹಲ ಸಂಗತಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...