alex Certify ಕಲಾಂ ಪ್ರತಿಮೆ ಸ್ವಚ್ಛ ಮಾಡುತ್ತಿದ್ದ ಕೇರಳ ವ್ಯಕ್ತಿ ನಿಗೂಢ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಲಾಂ ಪ್ರತಿಮೆ ಸ್ವಚ್ಛ ಮಾಡುತ್ತಿದ್ದ ಕೇರಳ ವ್ಯಕ್ತಿ ನಿಗೂಢ ಸಾವು

ಡಾ. ಎಪಿಜೆ ಅಬ್ದುಲ್​ ಕಲಾಂರ ಪ್ರತಿಮೆಯನ್ನ ಸ್ವಚ್ಛ ಮಾಡಿಯೇ ಜನಪ್ರಿಯತೆ ಗಳಿಸಿದ್ದ ಕೇರಳದ ಅನಾಥ ವ್ಯಕ್ತಿಯ ಶವ ನಿಗೂಢವಾಗಿ ಪತ್ತೆಯಾಗಿದೆ.

ಶಿವದಾಸನ್​ ಎಂದು ಗುರುತಿಸಲ್ಪಟ್ಟ ವ್ಯಕ್ತಿ ಕೊಚ್ಚಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇದೇ ಬೀದಿಯಲ್ಲಿ ವಾಸಿಸುತ್ತಿದ್ದ ಅವರು ಕಲಾಂರ ಪ್ರತಿಮೆಯನ್ನ ಸ್ವಚ್ಛ ಮಾಡಿ ಪುಷ್ಪಗಳಿಂದ ಅಲಂಕಾರ ಮಾಡಿದ್ದರು.

63 ವರ್ಷದ ಶಿವದಾಸನ್​ ನೈಸರ್ಗಿಕವಾಗಿಯೇ ಸಾವನ್ನಪ್ಪಿದ್ದಾರೆ ಎಂದು ಮೊದಲು ಭಾವಿಸಲಾಗಿತ್ತು. ಆದರೆ ಅವರ ದೇಹದ ಮೇಲಿನ ಗಾಯದ ಗುರುತುಗಳನ್ನ ನೋಡ್ತಿದ್ದರೆ ಶಿವದಾಸನ್​ ಜನಪ್ರಿಯತೆ ಸಹಿಸದ ಯಾರೋ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...