ವಾಯುಯಾನ ಕ್ಷೇತ್ರಕ್ಕೆ ಮೂರು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ವಾಯುನೆಲೆ ವೆಚ್ಚ ಕಡಿಮೆ ಮಾಡಲು ಆದ್ಯತೆ ನೀಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಪಿಪಿಪಿ ಮೂಲಕ ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ ಹಾಗೂ ದಕ್ಷತೆಗಾಗಿ ಒತ್ತು ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಮುಕ್ತ ವಾಯು ವಲಯದ ಮಿತಿ ಹೆಚ್ಚಳ ಮಾಡಲಾಗಿದ್ದು ಶೇಕಡಾ 60ರಷ್ಟು ವಾಯು ವಲಯವನ್ನು ಮುಕ್ತವಾಗಿ ಬಳಸಬಹುದಾಗಿದೆ. ವಿಮಾನ ನಿಲ್ದಾಣಗಳ ಸುಧಾರಣೆಗೆ ಕ್ರಮಕೈಗೊಳ್ಳಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 1000 ಕೋಟಿ ವೆಚ್ಛ ಕಡಿಮೆ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧೀಕಾರಕ್ಕೆ 2,300 ಕೋಟಿ ಮುಂಗಡ ಹಣ ನೀಡಲ ನಿರ್ಧಾರ ಮಾಡಲಾಗಿದೆ. 12 ವಿಮಾನ ನಿಲ್ದಾಣಗಳ ಖಾಸಗಿ ಹೂಡಿಕೆಯಿಂದ 13 ಸಾವಿರ ಕೋಟಿ ರೂ. ನಿರೀಕ್ಷೆ ಮಾಡಲಾಗಿದೆ.