alex Certify ಜಯಾ ಭಾಷಣದ ಬೆನ್ನಲ್ಲೇ ‘ಬಿಗ್ ಬಿ’ ನಿವಾಸಕ್ಕೆ ಭಾರೀ ಭದ್ರತೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಯಾ ಭಾಷಣದ ಬೆನ್ನಲ್ಲೇ ‘ಬಿಗ್ ಬಿ’ ನಿವಾಸಕ್ಕೆ ಭಾರೀ ಭದ್ರತೆ…!

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಬಳಿಕ ಬಾಲಿವುಡ್ ಚಿತ್ರರಂಗ ಎರಡು ಹೋಳುಗಳಾಗಿದೆ. ಕೆಲವರು ಬಾಲಿವುಡ್ ಚಿತ್ರರಂಗದಲ್ಲಿ ಸ್ವಜನ ಪಕ್ಷಪಾತದ ಕುರಿತು ಬಹಿರಂಗವಾಗಿಯೇ ಧ್ವನಿಯೆತ್ತಿದ್ದು, ಈ ಪೈಕಿ ನಟಿ ಕಂಗನಾ ರಣಾವತ್ ಮುಂಚೂಣಿಯಲ್ಲಿದ್ದಾರೆ.

ಕಂಗನಾ ರಣಾವತ್ ಡ್ರಗ್ಸ್ ವಿರುದ್ಧವೂ ಮಾತನಾಡುತ್ತಿದ್ದು, ನಟ ರವಿ ಕಿಶನ್ ಸಹ ಇದಕ್ಕೆ ಪೂರಕವಾಗಿಯೇ ಮಾತನಾಡಿದ್ದಾರೆ. ಇದರ ಮಧ್ಯೆ ಹಿರಿಯ ನಟಿ ಜಯಾಬಚ್ಚನ್, ಚಿತ್ರರಂಗದಿಂದ ಲಾಭ ಪಡೆದವರು ಈಗ ಅದರ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಲೋಕಸಭೆಯ ಅಧಿವೇಶನದ ವೇಳೆ ಪರೋಕ್ಷವಾಗಿ ಕಂಗನಾ ರಣಾವತ್ ಹಾಗೂ ರವಿ ಕಿಶನ್ ವಿರುದ್ಧ ಕಿಡಿಕಾರಿದ್ದರು.

ಜಯಾ ಬಚ್ಚನ್ ಈ ಭಾಷಣ ಈಗ ಪರ – ವಿರೋಧದ ಚರ್ಚೆಗೆ ಕಾರಣವಾಗಿದ್ದು, ಸುಶಾಂತ್ ಸಿಂಗ್ ಸಾವನ್ನಪ್ಪಿದ ವೇಳೆ ನೀವು ಮೌನ ವಹಿಸಿದ್ದು ಏಕೆ ಎಂದು ಕೆಲವರು ಜಯಾ ಬಚ್ಚನ್ ಅವರನ್ನು ಪ್ರಶ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಜುಹುವಿನಲ್ಲಿರುವ ಅಮಿತಾಬ್ ಬಚ್ಚನ್ ಅವರ ನಿವಾಸ ಹಾಗೂ ಹತ್ತಿರದ ಸಂಬಂಧಿಗಳ ನಿವಾಸಕ್ಕೂ ಬಿಗಿ ಭದ್ರತೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...