alex Certify ‘ತೇಜಸ್’ ಸೋಲಿನ ಬಳಿಕ ಇಂದಿರಾಗಾಂಧಿಯಾಗಿ ಕಂಗನಾ ರಣಾವತ್; ಜೂ.14 ರಂದು ಬೆಳ್ಳಿತೆರೆಗೆ ಅಪ್ಪಳಿಸಲಿದೆ ‘ಎಮರ್ಜೆನ್ಸಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ತೇಜಸ್’ ಸೋಲಿನ ಬಳಿಕ ಇಂದಿರಾಗಾಂಧಿಯಾಗಿ ಕಂಗನಾ ರಣಾವತ್; ಜೂ.14 ರಂದು ಬೆಳ್ಳಿತೆರೆಗೆ ಅಪ್ಪಳಿಸಲಿದೆ ‘ಎಮರ್ಜೆನ್ಸಿ’

‘ತುರ್ತುಪರಿಸ್ಥಿತಿ’ಯ ಐತಿಹಾಸಿಕ ರಾಜಕೀಯ ಕಥೆಯಾಧರಿಸಿದ ಎಮರ್ಜೆನ್ಸಿ ಸಿನಿಮಾ ಮೂಲಕ ರಾಷ್ರ್ಮಪ್ರಶಸ್ತಿ ನಟಿ ಕಂಗನಾ ರಣಾವತ್ ಮತ್ತೆ ತೆರೆ ಮೇಲೆ ಬರಲಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರದಲ್ಲಿ ಕಂಗನಾ ಕಾಣಿಸಿಕೊಂಡಿದ್ದು, ಈ ಐತಿಹಾಸಿಕ ರಾಜಕೀಯ ಕಥೆ ‘ತುರ್ತು ಪರಿಸ್ಥಿತಿ’ ಬೆಳ್ಳಿಪರದೆ ಮೇಲೆ ಈ ವರ್ಷ ಜೂನ್ 14 ರಂದು ಬರಲಿದೆ.

ಝೀ ಸ್ಟುಡಿಯೋಸ್ ಮತ್ತು ಮಣಿಕರ್ಣಿಕಾ ಫಿಲ್ಮ್ಸ್ ನಿರ್ಮಿಸಿದ ಈ ಮೆಗಾ ಬಜೆಟ್ ಚಲನಚಿತ್ರವು ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಒಂದು ಪ್ರಮುಖ ಕ್ಷಣದ ವಿವಾದಾತ್ಮಕ ನಿರೂಪಣೆಯನ್ನು ಬಿಚ್ಚಿಡಲು ಸಿದ್ಧವಾಗಿದೆ.

‘ತೇಜಸ್’ ಸೋಲಿನ ಬಳಿಕ ‘ಎಮರ್ಜೆನ್ಸಿ’ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲಿರುವ ಕಂಗನಾ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

“ಭಾರತದ ಕರಾಳ ದಿನದ ಹಿಂದಿನ ಕಥೆಯನ್ನು ಅನ್ಲಾಕ್ ಮಾಡಿ. 14ನೇ ಜೂನ್ 2024 ರಂದು ತುರ್ತು ಪರಿಸ್ಥಿತಿ ಬಿಡುಗಡೆಯಾಗಲಿದೆ. ಪ್ರಧಾನಿ ಇಂದಿರಾಗಾಂಧಿ ಅವರು ಗುಡುಗಿದ ಇತಿಹಾಸವು ಚಿತ್ರಮಂದಿರಗಳಲ್ಲಿ ಜೀವಂತವಾಗಲಿದೆ. 14ನೇ ಜೂನ್ 2024 ರಂದು ಚಿತ್ರಮಂದಿರಗಳಲ್ಲಿ ತುರ್ತು ಪರಿಸ್ಥಿತಿ.” ಎಂದು ಬರೆದಿದ್ದಾರೆ.

ಚಿತ್ರಕ್ಕಾಗಿ ನಿರ್ದೇಶಕಿ ಮತ್ತು ನಿರ್ಮಾಪಕಿ ಜವಾಬ್ದಾರಿ ಹೊತ್ತಿರುವ ಕಂಗನಾ ರಣಾವತ್, ದಿವಂಗತ ಪ್ರಧಾನಮಂತ್ರಿ ಇಂದಿರಾಗಾಂಧಿಯವರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಿನಿಮಾ ಪೋಸ್ಟರ್ ಹಂಚಿಕೊಂಡು ಬಿಡುಗಡೆ ದಿನಾಂಕ ಘೋಷಿಸಿದ್ದಾರೆ.

ಸಿನಿಮಾ ಬಗ್ಗೆ ಮಾತನಾಡಿರುವ ಕಂಗನಾ ರಣಾವತ್ “ತುರ್ತು ಪರಿಸ್ಥಿತಿಯು ನನ್ನ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ ಮತ್ತು ಮಣಿಕರ್ಣಿಕಾ ನಂತರ ನನ್ನ ಎರಡನೇ ನಿರ್ದೇಶನದ ಪ್ರಯತ್ನವಾಗಿದೆ. ಈ ಚಿತ್ರಕ್ಕಾಗಿ ನಾವು ಅತ್ಯುತ್ತಮ ಭಾರತೀಯ ಮತ್ತು ಅಂತರರಾಷ್ಟ್ರೀಯ ಪ್ರತಿಭೆಗಳನ್ನು ಒಟ್ಟುಗೂಡಿಸಿದ್ದೇವೆ ಎಂದಿದ್ದಾರೆ.

ಕಂಗನಾ ರಣಾವತ್ ಹೊರತಾಗಿ ‘ತುರ್ತು ಪರಿಸ್ಥಿತಿ’ ಚಿತ್ರದಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಾಡೆ, ವಿಶಾಕ್ ನಾಯರ್ ಮತ್ತು ದಿವಂಗತ ಸತೀಶ್ ಕೌಶಿಕ್ ಗಮನಾರ್ಹ ಪಾತ್ರಗಳಲ್ಲಿದ್ದಾರೆ.

ಚಿತ್ರಕ್ಕೆ ಸಂಚಿತ್ ಬಲ್ಹಾರಾ ಸಂಗೀತ ಸಂಯೋಜಿಸಿದ್ದು, ರಿತೇಶ್ ಶಾ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...