alex Certify ರೆಸ್ಟೋರೆಂಟ್​ ತಿನಿಸಲ್ಲಿ ಜೀವಂತ ಹುಳು; ಬೆಚ್ಚಿಬಿದ್ದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೆಸ್ಟೋರೆಂಟ್​ ತಿನಿಸಲ್ಲಿ ಜೀವಂತ ಹುಳು; ಬೆಚ್ಚಿಬಿದ್ದ ಮಹಿಳೆ

ಮನೆಯಲ್ಲಿ ತಯಾರಿಸಿದ ಆಹಾರದಲ್ಲಿ ರುಚಿ, ಶುಚಿಗೆ ಮಹತ್ವ ನೀಡಲಾಗುತ್ತದೆ. ಆದರೂ ಹೋಟೆಲ್​, ಬೀದಿ ಬದಿ ತಿನಿಸೆಂದರೆ ಅದೇನೋ ಆಸೆ. ಆದರೆ, ಅನೇಕ ಸಂದರ್ಭಗಳಲ್ಲಿ ಅಲ್ಲಿ ಕಹಿ ಘಟನೆಗಳು ನಡೆದುಬಿಡುತ್ತವೆ. ಈಗ ಅಂತದ್ದೊಂದು ಉದಾಹರಣೆ ಸಿಕ್ಕಿದೆ.

ಇತ್ತೀಚೆಗಷ್ಟೇ ಚೆನ್ನೈನ ಅಶೋಕ್​ ನಗರದ ನಿವಾಸಿ ರಾಣಿ ಎಂಬ ಮಹಿಳೆಗಾದ ಅನುಭವ ನೆಟ್ಟಿಗರಲ್ಲಿ ಜಿಗುಪ್ಸೆ ಮೂಡಿಸಿದೆ.

ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಆಹಾರಗಳ ರೆಸ್ಟೋರೆಂಟ್​ ಶಾಖೆಗಳನ್ನು ಹೊಂದಿರುವ ನಮ್ಮ ವೀಡು ವಸಂತ ಭವನದ ಶಾಖೆಯೊಂದರಲ್ಲಿ ರಾಣಿಯವರು ಚೋಲಾ ಭತೂರೆ​ ಆರ್ಡರ್​ ಮಾಡಿದ್ದರು. ಆಕೆ ಪಡೆದ ತಿಂಡಿಯಲ್ಲಿ ತೆವಳುತ್ತಿರುವ ಹುಳು ಕಂಡುಕೊಂಡರು.

ಕೀಟವನ್ನು ಕಂಡ ಅವರು ಗಾಬರಿಗೊಂಡು ಆಹಾರ ಸುರಕ್ಷತಾ ಇಲಾಖೆಗೆ ಪ್ರಕರಣವನ್ನು ವರದಿ ಮಾಡಿದರಲ್ಲದೇ ರೆಸ್ಟೋರೆಂಟ್​ ವಿರುದ್ಧ ದೂರು ದಾಖಲಿಸಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ರೆಸ್ಟೋರೆಂಟ್​ನ ನೈರ್ಮಲ್ಯ ಮಾನದಂಡಗಳನ್ನು ಪರಿಶೀಲಿಸಿದ್ದಾರೆ ಮತ್ತು ಅದರ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಷೇಧಿಸಿದ್ದಾರೆ.

ಈ ರೀತಿಯ ಪ್ರಕರಣಗಳು ಆಗಾಗ್ಗೆ ನಡೆಯುತ್ತಿರುತ್ತವೆ, ರವಿ ರೈ ರಾಣಾ ಎಂಬ ವ್ಯಕ್ತಿ ಎಲಾಂಟೆ ಮಾಲ್​ನಲ್ಲಿರುವ ಫುಡ್​ ಕೋರ್ಟ್​ನಲ್ಲಿ ಛೋಲೆ ಭತೂರೆ​ ಆರ್ಡರ್​ ಮಾಡಿದ್ದು, ಭತುರಾ ಅಡಿಯಲ್ಲಿ ಜೀವಂತ ಹಲ್ಲಿ ಪತ್ತೆಯಾಗಿತ್ತು. ಅವರು ಅದನ್ನು ರೆಕಾರ್ಡ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್​ ಮಾಡಿದ್ದರು.

ಮಹಿಳೆಗಾದ ಅನುಭವಕ್ಕೆ ನೆಟ್ಟಿಗರು ಗಾಬರಿಗೊಂಡಿದ್ದು, ಅಸಮಾಧಾನಯುತ ಪ್ರತಿಕ್ರಿಯೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...