alex Certify BIG NEWS: ವಿರೋಧದ ನಡುವೆ ವಿಧಾನಸಭೆ ಹಾಲ್ ನಲ್ಲಿ ವೀರ ಸಾವರ್ಕರ್ ಸೇರಿ 7 ಮಹನೀಯರ ಭಾವಚಿತ್ರ ಅನಾವರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಿರೋಧದ ನಡುವೆ ವಿಧಾನಸಭೆ ಹಾಲ್ ನಲ್ಲಿ ವೀರ ಸಾವರ್ಕರ್ ಸೇರಿ 7 ಮಹನೀಯರ ಭಾವಚಿತ್ರ ಅನಾವರಣ

ಬೆಳಗಾವಿ: ವಿಪಕ್ಷ ಕಾಂಗ್ರೆಸ್ ವಿರೋಧದ ನಡುವೆಯೂ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ವೀರ ಸಾವರ್ಕರ್ ಸೇರಿದಂತೆ 7 ಮಹನೀಯರ ಭಾವಚಿತ್ರಗಳನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅನಾವರಣಗೊಳಿಸಿದರು.

ವಿಧಾನಸಭೆಯ ಹಾಲ್ ನ ಬಾಗಿಲುಗಳನ್ನು ಬಂದ್ ಮಾಡಿ, ವಿಧಾನಸಭೆಯ ಗೋಡೆಗಳ ಮೇಲೆ ಅಳವಡಿಸಿದ್ದ ಸ್ವಾಮಿ ವಿವೇಕಾನಂದ, ಬಸವಣ್ಣ, ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರಬೋಸ್, ಸರ್ಧಾರ್ ವಲ್ಲಭ ಬಾಯ್ ಪಟೇಲ್, ವೀರ ಸಾವರ್ಕರ್, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ 7 ಮಹನಿಯರ ಭಾವಚಿತ್ರಗಳನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅನಾವರಣಗೊಳಿಸಿದರು.

ಈ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಗೋವಿಂದ ಕಾರಜೋಳ, ಮಾಧುಸ್ವಾಮಿ, ಸಿಸಿ.ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...