alex Certify BIG NEWS: ಮದುವೆ ಮನೇಲಿ ಹಪ್ಪಳಕ್ಕಾಗಿ ನಡೀತು ದೊಡ್ಡ ಗಲಾಟೆ; ಊಟಕ್ಕಾಗಿ ಹಾಕಿದ್ದ ಕುರ್ಚಿಗಳು ಪುಡಿಪುಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮದುವೆ ಮನೇಲಿ ಹಪ್ಪಳಕ್ಕಾಗಿ ನಡೀತು ದೊಡ್ಡ ಗಲಾಟೆ; ಊಟಕ್ಕಾಗಿ ಹಾಕಿದ್ದ ಕುರ್ಚಿಗಳು ಪುಡಿಪುಡಿ…!

The Great Andhra Wedding Thali - Delectable Reveries

ಕೆಲ ಮದುವೆ ಸಂದರ್ಭಗಳಲ್ಲಿ ವರನ ಕಡೆಯವರು ಇನ್ನಿಲ್ಲದಂತೆ ಜಬರ್ದಸ್ತ್ ತೋರಿಸುತ್ತಾರೆ. ವರನ ಕಡೆಯವರೆಂಬ ಏಕೈಕ ಕಾರಣಕ್ಕಾಗಿ ಹೆಣ್ಣಿನ ಮನೆಯವರನ್ನು ಗೋಳು ಹೊಯ್ದುಕೊಳ್ಳುತ್ತಾರೆ. ಇಂಥದೇ ಒಂದು ಪ್ರಸಂಗ ಈಗ ಕ್ಷುಲ್ಲಕ ಕಾರಣಕ್ಕಾಗಿ ಕೇರಳದಲ್ಲಿ ನಡೆದಿದೆ.

ಹೌದು, ಅಚ್ಚರಿಯಾದರೂ ಇದು ನಿಜ. ಹೆಚ್ಚುವರಿ ಹಪ್ಪಳ ಕೇಳಿದ ವೇಳೆ ತಮಗೆ ನೀಡಲಿಲ್ಲವೆಂಬ ಕಾರಣಕ್ಕೆ ವರನ ಕಡೆಯವರು ಮದುವೆ ಮನೆಯಲ್ಲಿ ಇನ್ನಿಲ್ಲದಂತೆ ದಾಂಧಲೆ ನಡೆಸಿದ್ದಾರೆ. ಇದರ ಪರಿಣಾಮ ಬರೋಬ್ಬರಿ 2 ಲಕ್ಷ ರೂಪಾಯಿ ನಷ್ಟವಾಗಿದೆ.

ಇಂಥದೊಂದು ಘಟನೆ ಕೇರಳದ ಅರಿಪ್ಪಾಡ್ ಎಂಬಲ್ಲಿ ನಡೆದಿದ್ದು, ವರನ ಸ್ನೇಹಿತರು ಊಟಕ್ಕೆ ಕುಳಿತಿದ್ದಾಗ ಹೆಚ್ಚುವರಿ ಹಪ್ಪಳ ಕೇಳಿದ್ದಾರೆ. ಅಷ್ಟರಲ್ಲಾಗಲೇ ಹಪ್ಪಳ ಖಾಲಿಯಾಗಿದ್ದ ಕಾರಣ ಇರುವ ವಿಷಯವನ್ನು ವಧುವಿನ ಕಡೆಯವರು ಹೇಳಿದ್ದಾರೆ.

ಆದರೆ ವರನ ಕಡೆಯವರೆಂಬ ಹಮ್ಮು ಹೊಂದಿದ್ದ ಆತನ ಸ್ನೇಹಿತರು ಗಲಾಟೆ ಶುರು ಮಾಡಿದ್ದಾರೆ. ಇದು ಪರಸ್ಪರ ಸಂಘರ್ಷಕ್ಕೆ ಕಾರಣವಾಗಿದ್ದು ಕುರ್ಚಿ – ಮೇಜು ಹಿಡಿದುಕೊಂಡು ಹೊಡೆದಾಡಿಕೊಂಡಿದ್ದಾರೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಸಿಸಿ ಟಿವಿ ದೃಶ್ಯಗಳನ್ನು ಪರಿಗಣಿಸಿ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...