alex Certify BIG NEWS: ‘ಅವರ ಆಡಿಯೋ, ವಿಡಿಯೋ’ ಎಲ್ಲರಿಗೂ ಗೊತ್ತಿದೆ; ಪ್ಲೇ ಆದರೆ ಸಂಸ್ಕೃತಿ ಗೊತ್ತಾಗುತ್ತೆ; ಹೆಚ್. ವಿಶ್ವನಾಥ್ ಗೆ ರೇಣುಕಾಚಾರ್ಯ ತಿರುಗೇಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‘ಅವರ ಆಡಿಯೋ, ವಿಡಿಯೋ’ ಎಲ್ಲರಿಗೂ ಗೊತ್ತಿದೆ; ಪ್ಲೇ ಆದರೆ ಸಂಸ್ಕೃತಿ ಗೊತ್ತಾಗುತ್ತೆ; ಹೆಚ್. ವಿಶ್ವನಾಥ್ ಗೆ ರೇಣುಕಾಚಾರ್ಯ ತಿರುಗೇಟು

ಬೆಂಗಳೂರು: ಸರ್ಕಾರದ ವಿರುದ್ಧ 20 ಸಾವಿರ ಕೋಟಿ ಟೆಂಡರ್ ಹಗರಣ ಸತ್ಯಕ್ಕೆ ದೂರವಾದದ್ದು, ಹೆಚ್. ವಿಶ್ವನಾಥ್ ಹತಾಶರಾಗಿ ಇಂತಹ ಆರೋಪಗಳನ್ನು ಮಾಡುತ್ತಿರುವುದು ತಪ್ಪು ಎಂದು ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದ್ದಾರೆ.

‌ʼಬಾಡಿ ಶೇಮಿಂಗ್‌ʼ ಮಾಡಿದ ವ್ಯಕ್ತಿಗೆ ಯುವತಿಯಿಂದ ಸಖತ್‌ ಟಾಂಗ್

ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಹೆಚ್. ವಿಶ್ವನಾಥ್ ಆಡಿಯೋ, ವಿಡಿಯೋ ಬಗ್ಗೆ ಎಲ್ಲರಿಗೂ ಗೊತ್ತಿದೆ. ಪ್ಲೇ ಆದರೆ ಅವರ ಸಂಸ್ಕೃತಿ ಎಂತಾದ್ದು ಎಂಬುದು ಗೊತ್ತಾಗುತ್ತೆ. ಅವರು ಬಿ ಎಸ್ ವೈ, ಕುಮಾರಸ್ವಾಮಿ, ಸಿದ್ದರಾಮಯ್ಯ, ಎಸ್.ಎಂ. ಕೃಷ್ಣ, ಹೆಚ್.ಡಿ. ದೇವೇಗೌಡ ಎಲ್ಲರ ಬಗ್ಗೆಯೂ ಮಾತನಾಡುತ್ತಾರೆ. ಆ ವ್ಯಕ್ತಿ ನಾಲಿಗೆ ಸಂಸ್ಕೃತಿ ಎಲ್ಲರಿಗೂ ಗೊತ್ತಿದೆ. ನಾನು ವ್ಯಕ್ತಿಗತವಾಗಿ ಯಾರ ಬಗ್ಗೆಯೂ ಮಾತನಾಡಲ್ಲ. ಆದರೆ ವಿಶ್ವನಾಥ್ ಇಂತಹ ಆರೋಪ ಮಾಡುವುದು ತಪ್ಪು ಎಂದರು.

ವಿಜಯೇಂದ್ರ ವಿರುದ್ಧ ಕಿಕ್ ಬ್ಯಾಕ್ ಪಡೆದ ಆರೋಪ: ಸರ್ಕಾರ ವಿರುದ್ಧ ಹೊಸ ಬಾಂಬ್ ಸಿಡಿಸಿದ ಹೆಚ್.ವಿಶ್ವನಾಥ್

ನೀರಾವರಿ ಇಲಾಖೆ ಟೆಂಡರ್ ಪಾರದರ್ಶಕವಾಗಿ ನಡೆದಿದೆ. ನೀರಾವರಿ ಇಲಾಖೆಗೆ ಬಿಡುಗಡೆಯಾದ ಹಣ ಹಾಗೂ ಕಾಮಗಾರಿ ಪ್ರತಿಯೊಂದರ ಬಗ್ಗೆಯೂ ವೆಬ್ ಸೈಟ್ ನಲ್ಲಿ ಎಲ್ಲ ಮಾಹಿತಿ ಸಿಗುತ್ತದೆ. ಹೀಗಿರುವಾಗ ಅಕ್ರಮ ನಡೆದಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ತಿಳಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...