ಬೆಂಗಳೂರು: ಗಿರಿನಗರದ ಸಮೀಪದ ವೀರಭದ್ರ ನಗರದಲ್ಲಿ ಕುರಿ ಸಾಕಾಣಿಕೆ ಶೆಡ್ ಮೇಲೆ ವನ್ಯಮೃಗವೊಂದು ದಾಳಿ ನಡೆಸಿದೆ.
ದಾಳಿಗೆ 6 ಕುರಿಗಳು, 11 ಮೇಕೆಗಳು ಬಲಿಯಾಗಿವೆ. ಪಟೇಲ್ ಅನಂತಸ್ವಾಮಿ ಎಂಬುವರಿಗೆ ಸೇರಿದ ಶೆಡ್ ನಲ್ಲಿ ಘಟನೆ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೀಳುನಾಯಿ ಅಥವಾ ಚಿರತೆ ದಾಳಿ ಮಾಡಿ ಕುರಿ, ಮೇಕೆಗಳನ್ನು ಕೊಂದು ಹಾಕಿದೆ ಎನ್ನಲಾಗಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.