alex Certify ‘ಭಾರತೀಯರು ಸುರಕ್ಷಿತವಾಗುವವರೆಗೂ ನಾವು ವಿಶ್ರಮಿಸುವ ಮಾತೇ ಇಲ್ಲ’ :ವಿದೇಶಾಂಗ ಸಚಿವ ಡಾ. ಎಸ್​ ಜೈಶಂಕರ್​​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಭಾರತೀಯರು ಸುರಕ್ಷಿತವಾಗುವವರೆಗೂ ನಾವು ವಿಶ್ರಮಿಸುವ ಮಾತೇ ಇಲ್ಲ’ :ವಿದೇಶಾಂಗ ಸಚಿವ ಡಾ. ಎಸ್​ ಜೈಶಂಕರ್​​​

ಯುದ್ಧ ಪೀಡಿತ ಉಕ್ರೇನ್​​ನ ನಗರಗಳಲ್ಲಿ ಹಾಗೂ ಗಡಿ ಭಾಗಗಳಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಭಾರತವು ಇನ್ನಷ್ಟು ಚುರುಕು ಮುಟ್ಟಿಸಿದೆ. ಇಂದು ಮಧ್ಯಾಹ್ನದ ಒಳಗಾಗಿ ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ತರಲು ಕನಿಷ್ಟ ಮೂರು ವಿಮಾನಗಳು ಸಿದ್ಧವಾಗಿರಲಿವೆ.

ರೋಮೆನಿಯಾದ ರಾಜಧಾನಿ ಬುಕಾರೆಸ್ಟ್​​ನಿಂದ ಎರಡು ವಿಮಾನಗಳು ಹಾಗೂ ಹಂಗೇರಿಯ ರಾಜಧಾನಿ ಬುಡಾಪೆಸ್ಟ್​​ನಿಂದ ಒಂದು ವಿಮಾನವು ಹೊರಡಲಿದೆ. ಈ ವಿಮಾನಗಳು ಮುಂಬೈ ಹಾಗೂ ದೆಹಲಿ ವಿಮಾನ ನಿಲ್ದಾಣಗಳಿಗೆ ಬಂದಿಳಿಯಲಿವೆ.

ಇಂದು ಬೆಳಗ್ಗೆಯಷ್ಟೇ ಉಕ್ರೇನ್​​ನಿಂದ 9ನೇ ವಿಮಾನವು ಭಾರತದತ್ತ ಮುಖ ಮಾಡಿದೆ. ಈ ವಿಚಾರವನ್ನು ಘೋಷಣೆ ಮಾಡಲು ಟ್ವೀಟ್​ ಮಾಡಿದ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್​ ಜೈಶಂಕರ್​, ನಮ್ಮ ಭಾರತೀಯರು ಸುರಕ್ಷಿತವಾಗುವ ತನಕ ನಾವು ವಿಶ್ರಾಂತಿ ಪಡೆಯುವುದಿಲ್ಲ ಎಂದಿದ್ದಾರೆ.

ಉಕ್ರೇನ್​ನಿಂದ ಭಾರತೀಯರನ್ನು ತಾಯ್ನಾಡಿಗೆ ಮರಳಿ ತರುವ ಕಾರ್ಯಕ್ಕೆ ಆಪರೇಷನ್​ ಗಂಗಾ ಎಂದು ಹೆಸರಿಡಲಾಗಿದ್ದು ಈ ಸಂಬಂಧ ಕೇಂದ್ರ ಸಚಿವ ಡಾ. ಎಸ್​ ಜೈಶಂಕರ್​ ನಿರಂತರವಾಗಿ ಪೋಸ್ಟ್​ ಮಾಡುತ್ತಲೇ ಇದ್ದಾರೆ.

ಉಕ್ರೇನ್‌ನಿಂದ ಸ್ಥಳಾಂತರಿಸಲಾದ 182 ಭಾರತೀಯ ಪ್ರಜೆಗಳನ್ನು ಹೊತ್ತ ಏಳನೇ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಇಂದು ಬೆಳಗ್ಗೆ ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‌ನಿಂದ ಮುಂಬೈಗೆ ಬಂದಿಳಿದಿದೆ ಎಂದು ಏರ್‌ಲೈನ್ ವಕ್ತಾರರು ಅಧಿಕೃತ ಮಾಹಿತಿ ನೀಡಿದ್ದಾರೆ.

— Dr. S. Jaishankar (@DrSJaishankar) February 28, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...