alex Certify ನಿಜ ಜೀವನದ ‘ನಾಯಕ್’: ಚರಂಡಿ ಸ್ವಚ್ಛಗೊಳಿಸಿ ಕ್ಷೀರಾಭಿಷೇಕ ಮಾಡಿಸಿಕೊಂಡ ಆಪ್ ಕಾರ್ಪೊರೇಟರ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಜ ಜೀವನದ ‘ನಾಯಕ್’: ಚರಂಡಿ ಸ್ವಚ್ಛಗೊಳಿಸಿ ಕ್ಷೀರಾಭಿಷೇಕ ಮಾಡಿಸಿಕೊಂಡ ಆಪ್ ಕಾರ್ಪೊರೇಟರ್..!

ದೆಹಲಿ: ನೀವು ‘ನಾಯಕ್’ ಸಿನಿಮಾವನ್ನು ನೋಡಿದ್ದೀರಾ..? ನೋಡಿದ್ದರೆ ಇಲ್ಲೊಂದೆಡೆ ನಡೆದ ದೃಶ್ಯ ನಿಮಗೆ ಖಂಡಿತಾ ನಾಯಕ್ ಸಿನಿಮಾವನ್ನು ನೆನಪಿಸುತ್ತದೆ.

ಹೌದು, ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಪೊರೇಟರ್ ಸ್ವತಃ ಚರಂಡಿಗೆ ಇಳಿದು ಸ್ವಚ್ಛಗೊಳಿಸಿದ್ದಾರೆ. ನಂತರ ಹಾಲಿನ ಅಭಿಷೇಕದಲ್ಲಿ ಮಿಂದಿದ್ದಾರೆ. ಸದ್ಯ, ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಪೂರ್ವ ದೆಹಲಿಯ ಎಎಪಿ ಕೌನ್ಸಿಲರ್ ಹಸೀಬ್-ಉಲ್-ಹಸನ್ ಅವರು ಶಾಸ್ತ್ರಿ ಪಾರ್ಕ್‌ಗೆ ಭೇಟಿ ನೀಡಿದ್ದಾರೆ. ಈ ವೇಳೆ ದುರ್ವಾಸನೆಯಿಂದ ತುಂಬಿ ಹರಿಯುತ್ತಿರುವ ಚರಂಡಿಯನ್ನು ಕಂಡಿದ್ದಾರೆ.  ಸಿನಿಮಾ ಶೈಲಿಯಲ್ಲಿ, ಹಸನ್ ಅದನ್ನು ಸ್ವಚ್ಛಗೊಳಿಸಲು ತುಂಬಿ ಹರಿಯುತ್ತಿದ್ದ ಚರಂಡಿಗೆ ಧುಮುಕಿದ್ದಾರೆ.

ಟ್ವಿಟರ್‌ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಬಿಳಿ ಕುರ್ತಾ ಧರಿಸಿರುವ ಕೌನ್ಸಿಲರ್ ಚರಂಡಿಗೆ ಧುಮುಕಿ ಸ್ವಚ್ಛಗೊಳಿಸುತ್ತಿರುವುದನ್ನು ನೋಡಬಹುದು. ಚರಂಡಿ ಸ್ವಚ್ಛಗೊಳಿಸಿದ ನಂತರ, ನಾಯಕ್ ಚಿತ್ರದಲ್ಲಿ ನಟ ಅನಿಲ್ ಕಪೂರ್ ಅವರ ರೀತಿಯಲ್ಲಿ ಹಸನ್ ಬೆಂಬಲಿಗರು ಅವರ ಮೇಲೆ ಹಾಲು ಸುರಿದಿದ್ದಾರೆ.

ನಂತರ ಮಾತನಾಡಿದ ಹಸನ್, ಚರಂಡಿ ತುಂಬಿ ಹರಿಯುತ್ತಿದ್ದು, ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...