alex Certify ‘ತಂದೆ ಗೆಲ್ಲುವವರೆಗೂ ವಿವಾಹವಾಗುವುದಿಲ್ಲ’ : ನವಜೋತ್​ ಸಿಂಗ್​ ಸಿಧು ಪುತ್ರಿ ಶಪಥ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ತಂದೆ ಗೆಲ್ಲುವವರೆಗೂ ವಿವಾಹವಾಗುವುದಿಲ್ಲ’ : ನವಜೋತ್​ ಸಿಂಗ್​ ಸಿಧು ಪುತ್ರಿ ಶಪಥ

ಫೆಬ್ರವರಿ 20ರಂದು ನಡೆಯಲಿರುವ ಪಂಜಾಬ್​ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್​ ನಾಯಕ ನವಜೋತ್​ ಸಿಂಗ್​ ಸಿಧು ಪುತ್ರಿ ರಬಿಯಾ ಸಿಧು ಅಮೃತಸರ(ಪೂರ್ವ) ಕ್ಷೇತ್ರದಲ್ಲಿ ತಮ್ಮ ತಂದೆಯ ಪರ ಪ್ರಚಾರ ನಡೆಸಿದರು.

ಪ್ರಚಾರದ ವೇಳೆಯಲ್ಲಿ ಮಾಧ್ಯಮಗಳ ಜೊತೆಯಲ್ಲಿ ಮಾತನಾಡಿದ ರಾಬಿಯಾ, ಕಾಂಗ್ರೆಸ್​ ಸಿಎಂ ಅಭ್ಯರ್ಥಿ ಹಾಗೂ ಹಾಲಿ ಸಿಎಂ ಚರಂಜೀತ್​ ಸಿಂಗ್​ ಚನ್ನಿ ವಿರುದ್ಧ ವಾಗ್ದಾಳಿ ನಡೆಸಿದರು.

ಚನ್ನಿ ತಾವು ಹೇಳಿಕೊಂಡಂತೆ ನಿಜವಾಗಿಯೂ ಬಡವರಾ ಎಂಬ ಸಂದೇಹವನ್ನು ವ್ಯಕ್ತಪಡಿಸಿದ ರಾಬಿಯಾ ಅವರ ಬ್ಯಾಂಕ್​ ಖಾತೆಗಳನ್ನು ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.

ನಿಜವಾಗಿಯೂ ಚನ್ನಿ ಬಡವರಾ..? ಮೊದಲು ಅವರ ಬ್ಯಾಂಕ್​ ಖಾತೆಯನ್ನು ಪರಿಶೀಲನೆ ಮಾಡಿ. ನಿಮಗೆ 133 ಕೋಟಿಗೂ ಅಧಿಕ ಹಣ ಇರಬಹುದು ಎಂದು ಸಂದೇಹ ವ್ಯಕ್ತಪಡಿಸಿದರು. ಪಂಜಾಬ್​ ವಿಧಾನಸಭಾ ಚುನಾವಣೆಯಲ್ಲಿ ಚನ್ನಿಯನ್ನು ಸಿಎಂ ಅಭ್ಯರ್ಥಿಯೆಂದು ಘೋಷಿಸಿ ತಮ್ಮ ತಂದೆ ನವಜೋತ್​ ಸಿಂಗ್​ ಸಿಧುವನ್ನು ಕಡೆಗಣಿಸಿದ್ದಕ್ಕಾಗಿ ಕಾಂಗ್ರೆಸ್​ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಬಹುಶಃ ಹೈಕಮಾಂಡ್​ಗೆ ಯಾರೋ ಒತ್ತಡ ಹೇರಿರಬಹುದು. ಆದರೆ ನೀವು ಪ್ರಾಮಾಣಿಕ ವ್ಯಕ್ತಿಯನ್ನು ದೀರ್ಘಕಾಲದವರೆಗೆ ಹಿಡಿದಿಡಲು ಸಾಧ್ಯವಿಲ್ಲ. ಅಪ್ರಮಾಣಿಕ ವ್ಯಕ್ತಿಯು ಕ್ರಮೇಣವಾಗಿ ದೂರ ಸರಿಯಲೇಬೇಕು ಎಂದು ಹೇಳಿದರು.

ಸಿಧು ಕಳೆದ 14 ವರ್ಷಗಳಿಂದ ಪಂಜಾಬ್​​ಗೆ ಸೇವೆ ಸಲ್ಲಿಸುತ್ತಿದ್ದಾರೆ. ಅವರು ರಾಜ್ಯಕ್ಕೆ ಮಾದರಿ ರಾಜಕಾರಣಿಯಾಗಿದ್ದಾರೆ. ಅವರಿಗೆ ಗೌರವವನ್ನು ನೀಡಬೇಕು ಎಂದು ರಾಬಿಯಾ ಹೇಳಿದ್ದಾರೆ. ಅಲ್ಲದೇ ನನ್ನ ತಂದೆಗೂ ಹಾಗೂ ಪಂಜಾಬ್​ನಲ್ಲಿರುವ ಇತರೆ ಯಾವುದೇ ರಾಜಕಾರಣಿಗಳಿಗೂ ಹೋಲಿಕೆಯೇ ಇಲ್ಲ ಎಂದು ಹೇಳಿದರು. ಅಲ್ಲದೇ ತಮ್ಮ ತಂದೆ ಚುನಾವಣೆಯಲ್ಲಿ ಗೆಲ್ಲುವ ತನಕ ತಾವು ಮದುವೆಯಾಗುವುದಿಲ್ಲ ಎಂದು ಪಣತೊಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...