alex Certify ಕುಟುಂಬದೊಂದಿಗೆ ರಿಶಿಕೇಷಕ್ಕೆ ತೀರ್ಥಯಾತ್ರೆ ಕೈಗೊಂಡ ಸಿಧು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಟುಂಬದೊಂದಿಗೆ ರಿಶಿಕೇಷಕ್ಕೆ ತೀರ್ಥಯಾತ್ರೆ ಕೈಗೊಂಡ ಸಿಧು

ಕುಟುಂಬದೊಂದಿಗೆ ರಿಶಿಕೇಷಕ್ಕೆ ಭೇಟಿ ನೀಡಿದ್ದ ಮಾಜಿ ಕ್ರಿಕೆಟಿಗ ಹಾಗೂ ಕಾಂಗ್ರೆಸ್ ನಾಯಕ ನವಜೋತ್‌ ಸಿಂಗ್ ಸಿಧು ಟ್ವಿಟರ್‌ನಲ್ಲಿ ಈ ಸಂದರ್ಭದ ಫೋಟೋಗಳನ್ನು ಶೇರ್‌ ಮಾಡಿದ್ದಾರೆ. ಗಂಗಾ ದಸರಾ ಸಂದರ್ಭದಲ್ಲಿ ಸಿಧು & ಕುಟುಂಬ ಈ ತೀರ್ಥಯಾತ್ರೆ ಕೈಗೊಂಡಿದೆ.

ಮಡದಿ ನವಜೋತ್‌ ಕೌರ್‌ ಸಿಧು, ಪುತ್ರ ಕರನ್ ಸಿಧು ಹಾಗೂ ಪುತ್ರಿ ರಬಿಯಾ ಸಿಧುರೊಂದಿಗೆ ತೀರ್ಥಯಾತ್ರೆಯ ಸಂತಸ ಕ್ಷಣವೊಂದರ ಚಿತ್ರವನ್ನು ಸಿಧು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

“ರಿಶಿಕೇಷದಲ್ಲಿ ಗಂಗಾ ದಸರಾ ಸಂದರ್ಭದಲ್ಲಿ ಪವಿತ್ರವಾದ ಗಂಗೆಯಲ್ಲಿ ಮಿಂದೇಳುವ ನನ್ನ ಮಡದಿಯ ಮನದಾಳದ ಬಯಕೆಯನ್ನು ಈಡೇರಿಸುತ್ತಿದ್ದೇನೆ,” ಎಂದು ಕ್ಯಾಪ್ಷನ್ ಕೊಟ್ಟು ಈ ಫೋಟೋ ಶೇರ್‌ ಮಾಡಿದ್ದಾರೆ ಸಿಧು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...