alex Certify ಚುನಾವಣೆಯ ಹೊಸ್ತಿಲಲ್ಲೇ ಸಿಧು ವಿರುದ್ಧ ಆರೋಪಗಳ ಸುರಿಮಳೆಗೈದ ಸಹೋದರಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚುನಾವಣೆಯ ಹೊಸ್ತಿಲಲ್ಲೇ ಸಿಧು ವಿರುದ್ಧ ಆರೋಪಗಳ ಸುರಿಮಳೆಗೈದ ಸಹೋದರಿ..!

ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲೇ ಪಂಜಾಬ್​ ಕಾಂಗ್ರೆಸ್​ ಮುಖ್ಯಸ್ಥ ನವಜೋತ್​ ಸಿಂಗ್​ ಸಿಧು ಹಿರಿಯ ಸಹೋದರಿ ಸುಮನ್​ ತುರ್​ ತಮ್ಮ ಸಹೋದರನ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ. ಹಣದ ಆಸೆಗಾಗಿ ನವಜೋತ್​ ಸಿಂಗ್​ ಸಿಧು ತಮ್ಮ ವೃದ್ಧ ತಾಯಿಯನ್ನು ತೊರೆದಿದ್ದರು. ಸಿಧು ಒಬ್ಬ ಕ್ರೂರ ವ್ಯಕ್ತಿ ಎಂದು ಅವರು ಜರಿದಿದ್ದಾರೆ. ಸುಮನ್​ ಅಮೆರಿಕದಲ್ಲಿ ನೆಲೆಸಿದ್ದಾರೆ.

ಸುಮನ್​ ಪ್ರಸ್ತುತ ಚಂಡೀಗಢದಲ್ಲಿದ್ದಾರೆ. ಇಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 1986ರಲ್ಲಿ ನಮ್ಮ ತಂದೆ ನಿಧನರಾದ ಬಳಿಕ ನವಜೋತ್​ ಸಿಂಗ್​ ಸಿಧು ತಾಯಿಯನ್ನು ಮನೆಯಿಂದ ಹೊರಹಾಕಿದ್ದರು. 1989ರಲ್ಲಿ ನಮ್ಮ ತಾಯಿ ರೈಲ್ವೆ ನಿಲ್ದಾಣದಲ್ಲಿ ನಿಧನರಾಗಿದ್ದಾರೆ ಎಂದು ಹೇಳಿದರು.

ನಾವು ಅತ್ಯಂತ ಕಷ್ಟದ ದಿನಗಳನ್ನು ನೋಡಿದ್ದೇವೆ. ನಮ್ಮ ತಾಯಿ 4 ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿದ್ದರು. ನಾನು ಏನು ಹೇಳುತ್ತಿದ್ದೇನೋ ಅವೆಲ್ಲದಕ್ಕೂ ನನ್ನ ಬಳಿ ದಾಖಲೆಗಳಿವೆ ಎಂದು ಸುಮನ್​ ಹೇಳಿದ್ದಾರೆ.

ಆಸ್ತಿಗಾಗಿ ನವಜೋತ್​ ಸಿಂಗ್​ ಸಿಧು ನಮ್ಮೆಲ್ಲರ ಜೊತೆ ಸಂಪರ್ಕವನ್ನು ಕಡಿದುಕೊಂಡಿದ್ದಾರೆ. ನಮ್ಮ ತಂದೆ ಪಿಂಚಣಿ ಹಣ, ಮನೆ ಸೇರಿದಂತೆ ಆಸ್ತಿಯನ್ನು ಹೊಂದಿದ್ದರು ಎಂದು ಸುಮನ್​ ಹೇಳಿದ್ದಾರೆ.

ನವಜೋತ್​ ಹಣದ ಆಸೆಗಾಗಿ ನನ್ನ ತಾಯಿಯನ್ನು ಹೊರಗಟ್ಟಿದ್ದಾರೆ. ನಮಗೆ ಸಿಧುವಿನಿಂದ ಯಾವುದೇ ಹಣ ಬೇಕಾಗಿಲ್ಲ ಎಂದೂ ಅವರು ಇದೇ ವೇಳೆ ಹೇಳಿದ್ರು. 1987 ರಲ್ಲಿ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ನವಜೋತ್​ ಸಿಂಗ್​ ಸಿಧು, ನಮ್ಮ ತಾಯಿ – ತಂದೆ ಬೇರಾಗಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿದ್ದರು. ಆತ ಒಬ್ಬ ಕ್ರೂರ ವ್ಯಕ್ತಿ ಎಂದು ಕಿಡಿಕಾರಿದರು.

ನನ್ನ ತಂದೆ ತಾಯಿ ಬೇರ್ಪಟ್ಟಿದ್ದರು ಎಂಬುದಕ್ಕೆ ನವಜೋತ್​ ಬಳಿ ಇರುವ ದಾಖಲೆಗಳನ್ನು ತೋರಿಸಲಿ ಎಂದು ಇದೇ ವೇಳೆ ತಮ್ಮನಿಗೆ ಸವಾಲ್​ ಎಸೆದರು. ನಾನು ನವಜೋತ್​​ನನ್ನು ಜನವರಿ 20ರಂದು ಭೇಟಿಯಾಗಲು ಹೋಗಿದ್ದೆ. ಆದರೆ ಸಿಧು ನನ್ನನ್ನು ಭೇಟಿಯಾಗಲು ನಿರಾಕರಿಸಿದ್ದಾನೆ. ಆತ ನನ್ನ ಮೊಬೈಲ್​ ಸಂಖ್ಯೆಯನ್ನೂ ಬ್ಲಾಕ್​ ಮಾಡಿದ್ದಾನೆ. ಅಲ್ಲದೇ ಮನೆಯ ಸಿಬ್ಬಂದಿಗೆ ನನಗೆ ಬಾಗಿಲು ತೆರೆಯದಂತೆ ಹೇಳಿದ್ದಾನೆ. ಆದರೆ ನನ್ನ ತಾಯಿಗೆ ಆದ ಅನ್ಯಾಯಕ್ಕೆ ನ್ಯಾಯ ಸಿಗಲೇಬೇಕು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...