alex Certify ಚಿರತೆ ಮರಿಗಳಿಗೆ ನಾಮಕರಣ ಮಾಡಿ ಹಾಲು ಉಣಿಸಿದ ಯೋಗಿ ಆದಿತ್ಯನಾಥ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿರತೆ ಮರಿಗಳಿಗೆ ನಾಮಕರಣ ಮಾಡಿ ಹಾಲು ಉಣಿಸಿದ ಯೋಗಿ ಆದಿತ್ಯನಾಥ್​

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಬುಧವಾರ ಗೋರಖ್​ಪುರ ಮೃಗಾಲಯಕ್ಕೆ ಭೇಟಿ ನೀಡಿ ಅಲ್ಲಿ ಚಿರತೆ ಮರಿಗೆ ಹಾಲುಣಿಸಿದ್ದಾರೆ.

ಗೋರಖ್​ಪುರದ ಶಹೀದ್​ ಅಶ್ಫಾಕ್​ ಉಲ್ಲಾ ಖಾನ್​ ಜಿಯಾಲಾಜಿಕಲ್​ ಪಾರ್ಕ್​ ಮತ್ತು ಪಶುವೈದ್ಯಕಿಯ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ, ಅಲ್ಲಿನ ಸ್ಥಿತಿಗತಿಯ ತಪಾಸಣೆ ನಡೆಸಿದರು. ತಮ್ಮ ಭೇಟಿಯ ಸಂದರ್ಭದಲ್ಲಿ ಆದಿತ್ಯನಾಥ್​ ಅವರು ಕಾನ್ಪುರದ ಮೃಗಾಲಯದಿಂದ ತರಲಾದ ಬಿಳಿ ಹುಲಿ ಮತ್ತು ಎರಡು ಹಿಮಾಲಯನ್​ ಕಪ್ಪು ಕರಡಿಗಳನ್ನು ಮೃಗಾಲಯದಲ್ಲಿ ಬಿಡುಗಡೆ ಮಾಡಿದರು. ಮೃಗಾಲಯದ ಆಸ್ಪತ್ರೆಯಲ್ಲಿ ಇರಿಸಲಾಗಿದ್ದ ಎರಡು ಚಿರತೆ ಮರಿಗಳಿಗೆ ಭವಾನಿ ಮತ್ತು ಚಂಡಿ ಎಂದು ಹೆಸರಿಟ್ಟಿದ್ದಾರೆ. ಬಳಿಕ ಚಿರತೆ ಮರಿಗೆ ಹಾಲನ್ನು ಕುಡಿಸಿದ್ದಾರೆ.

ಯುಪಿ ಸರ್ಕಾರದ ಅಧಿಕೃತ ಯೂಟ್ಯೂಬ್​ ಚಾನೆಲ್​ನಲ್ಲಿ ವೀಡಿಯೊವನ್ನು ಪೋಸ್ಟ್​ ಮಾಡಲಾಗಿದೆ. ನಂತರ, ಮೃಗಾಲಯದ ಅಧಿಕಾರಿಗಳು ಆವರಣದ ವೈಶಿಷ್ಟ್ಯಗಳನ್ನು ಮುಖ್ಯಮಂತ್ರಿಗೆ ವಿವರಿಸಿದರು ಮತ್ತು ಪ್ರಾಣಿಗಳನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬುದನ್ನು ತಿಳಿಸಿದ್ದಾರೆ.

ಆದಿತ್ಯನಾಥ್​ ಅವರು ಮೃಗಾಲಯದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ವನ್ಯಜೀವಿಗಳ ರಕ್ಷಣೆ ಮತ್ತು ಸಂರಕ್ಷಣೆಯ ಅಗತ್ಯವನ್ನು ಪ್ರತಿಪಾದಿಸಿದರು. ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ವನ್ಯಜೀವಿಗಳ ಸರಿಯಾದ ಆರೈಕೆ ಮತ್ತು ಚಿಕಿತ್ಸೆಗಾಗಿ ಪಶುವೈದ್ಯರ ಪ್ರತ್ಯೇಕ ವೃಂದದ ಅಗತ್ಯವನ್ನು ತಿಳಿಸಿದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...