alex Certify ‘ಕೈ’ ಅಧ್ಯಕ್ಷರ ಭ್ರಷ್ಟಾಚಾರ ಬಯಲಾಗುತ್ತಿದ್ದಂತೆ ಬಿಜೆಪಿ ತಲೆಗೆ ಕಟ್ಟುವ ಸಿದ್ಧತೆ; ಕೋತಿ ತಾನು ಬೆಣ್ಣೆ ತಿಂದು ಮೇಕೆ ಮೂತಿಗೆ ಹಚ್ಚಿದಂತೆ; ಕಾಂಗ್ರೆಸ್ ಗೆ ಸಿ.ಟಿ. ರವಿ ತಿರುಗೇಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೈ’ ಅಧ್ಯಕ್ಷರ ಭ್ರಷ್ಟಾಚಾರ ಬಯಲಾಗುತ್ತಿದ್ದಂತೆ ಬಿಜೆಪಿ ತಲೆಗೆ ಕಟ್ಟುವ ಸಿದ್ಧತೆ; ಕೋತಿ ತಾನು ಬೆಣ್ಣೆ ತಿಂದು ಮೇಕೆ ಮೂತಿಗೆ ಹಚ್ಚಿದಂತೆ; ಕಾಂಗ್ರೆಸ್ ಗೆ ಸಿ.ಟಿ. ರವಿ ತಿರುಗೇಟು

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲೇ ಭ್ರಷ್ಟಾಚಾರದ ಹೆಗ್ಗಣಗಳಿಂದ ಲೂಟಿಯಾಗುತ್ತಿದ್ದರೂ ಬೇರೆಯವರ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಿಗೆ ಯಾವ ಬೆಲೆಯಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರಶ್ನಿಸಿದ್ದಾರೆ.

ನಾವು ಎಲ್ಲಾ ವರ್ಗದ ಪರ ಎಂದು ಎಲ್ಲರ ಮುಂದೆ ಪರ್ಸಂಟೇಜ್ ಗಾಗಿ ಕೈ ಚಾಚುವ ಭ್ರಷ್ಟರಿಂದ ಈ ದೇಶ, ರಾಜ್ಯ ಉದ್ದಾರವಾಗಲು ಸಾಧ್ಯವೇ? ಎಂದು ಸರಣಿ ಟ್ವೀಟ್ ಮೂಲಕ ಸಿ.ಟಿ. ರವಿ, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ನಂಬರ್ 3ನೇ ಸ್ಥಾನದಲ್ಲಿ ಶಿಯೋಮಿ, ಎರಡನೇ ಸ್ಥಾನದಲ್ಲಿ ಆಪಲ್….! ಮೊದಲ ಸ್ಥಾನ ಯಾರಿಗೆ ಗೊತ್ತಾ….?

ಕೋತಿ ತಾನು ಬೆಣ್ಣೆ ತಿಂದು ಮೇಕೆ ಮೂತಿಗೆ ಹಚ್ಚಿದಂತೆ ವಿ.ಎಸ್. ಉಗ್ರಪ್ಪ ಮಾಧ್ಯಮಗಳಲ್ಲಿ ಬಹಿರಂಗ ಮಾಡಿದ ಆ ಪಕ್ಷದ ಅಧ್ಯಕ್ಷರ ಸತ್ಯ ವಿಶ್ವ ವಿಖ್ಯಾತವಾಗುತ್ತಿದ್ದಂತೆ ಬಿಜೆಪಿ ನಾಯಕರ ತಲೆಗೆ ಕಟ್ಟಲು ಮುಂದಾದರು. ಕಮಿಷನ್ ಗಿರಾಕಿಗಳ ಸತ್ಯ ಹೊರ ಬರುತ್ತಿದ್ದಂತೆ ಬಿಜೆಪಿ ವಿರುದ್ಧ ಟ್ವೀಟ್ ಮಾಡಿ ವಿಷಯಾಂತರ ಮಾಡುತ್ತಿರುವುದು ನಾಚಿಕೆಗೇಡು ಎಂದು ತಿರುಗೇಟು ನೀಡಿದ್ದಾರೆ.

ಅಲ್ಲದೇ ತಮ್ಮ ವಿರುದ್ಧ ಕೋಟಿ ರವಿ ಆರೋಪಕ್ಕೂ ಪ್ರತಿಕ್ರಿಯಿಸಿರುವ ಸಿ.ಟಿ. ರವಿ, ನನ್ನ ಆಸ್ತಿ ಎಷ್ಟಿತ್ತೋ ಅಷ್ಟೇ ಇದೆ. ಲೋಕಾಯುಕ್ತಕ್ಕೆ ದೂರು ಕೊಟ್ಟವರಿಗೆ ಅದರ ದಾಖಲೆ ಸಿಕ್ಕಿರಬಹುದು. 800 ಪಟ್ಟಿನಷ್ಟು ಆಸ್ತಿ ಏರಿಕೆ ಆದದ್ದು ಯಾರದ್ದು ? ಕಾಂಗ್ರೆಸ್ ನವರಿಗೆ ಗೊತ್ತಿರಬಹುದಲ್ಲವೇ? ಕಾಂಗ್ರೆಸ್ ತಾನು ಕಳ್ಳ ಪರರ ನಂಬ ಎಂದು ಟೀಕಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...