alex Certify ಈ ರಾಶಿಯವರಿಗೆ ಹುಡುಕಿಕೊಂಡು ಬರಲಿದೆ ಹೊಸ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಹುಡುಕಿಕೊಂಡು ಬರಲಿದೆ ಹೊಸ ಅವಕಾಶ

ಮೇಷ : ನಿಮ್ಮ ಸಾಧನೆಯು ಪೋಷಕರ ಗೌರವ ಹೆಚ್ಚಿಸಲಿದೆ. ಕಚೇರಿ ಕೆಲಸದ ನಿಮಿತ್ತ ವಾರಗಳ ಕಾಲ ದೂರ ಪ್ರಯಾಣ ಮಾಡಿರುವ ನೀವು ಅತಿಯಾಗಿ ದಣಿಯಲಿದ್ದೀರಿ. ದಂಪತಿ ಇಂದು ಉತ್ತಮ ಸಮಯವನ್ನು ಕಳೆಯಲಿದ್ದಾರೆ.

ವೃಷಭ : ಕಚೇರಿಯಲ್ಲಿ ಒತ್ತಡದಿಂದ ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಾಗಲಿದೆ. ಮೇಲಾಧಿಕಾರಿಗಳನ್ನು ಭೇಟಿಯಾಗುವ ಮುನ್ನ ಎಲ್ಲಾ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಇಲ್ಲ ಅಂದರೆ ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಲಿದ್ದೀರಿ. ಕಂಕಣ ಭಾಗ್ಯವಿದೆ.

ಮಿಥುನ : ವೈವಾಹಿಕ ಜೀವನದಲ್ಲಿ ಉಂಟಾಗಿರುವ ಸಮಸ್ಯೆಗಳು ಒಂದೊಂದಾಗಿಯೇ ಶಮನವಾಗಲಿದೆ. ಕಾನೂನಿನ ಸಂಬಂಧಪಟ್ಟ ವ್ಯಾಜ್ಯಗಳಲ್ಲಿ ಯಶಸ್ಸು ಸಾಧಿಸಲಿದ್ದೀರಿ.

ಕಟಕ : ಹೊಸ ಹೂಡಿಕೆಗಳನ್ನು ಮಾಡಲು ಇದು ಒಳ್ಳೆಯ ದಿನವಾಗಿದೆ. ಸಾರ್ವಜನಿಕ ಜೀವನದಲ್ಲಿ ಉತ್ತಮ ಗೌರವ ಸಂಪಾದಿಸಲಿದ್ದೀರಿ. ವೈದ್ಯಕೀಯ ವೃತ್ತಿಯಲ್ಲಿ ಇರುವವರಿಗೆ ಒತ್ತಡ ಹೆಚ್ಚಾಗಲಿದೆ.

ಸಿಂಹ : ಸರ್ಕಾರಿ ಕೆಲಸಗಳಲ್ಲಿ ವಿಳಂಬ ಉಂಟಾಗಲಿದೆ. ಇದರಿಂದ ನಿಮಗೆ ಅನೇಕ ರೀತಿಯಲ್ಲಿ ತೊಂದರೆ ಉಂಟಾಗಲಿದೆ. ಲಾಭವನ್ನು ಪಡೆಯಲು ಹಲವು ಮಾರ್ಗಗಳನ್ನು ಕಂಡುಕೊಳ್ಳಲಿದ್ದೀರಿ. ಭೂ ವಾಜ್ಯಗಳು ಸುಧಾರಿಸಲಿವೆ.

ಕನ್ಯಾ : ಭೂಮಿ ಖರೀದಿ ಮಾಡಬೇಕು ಎಂದುಕೊಂಡವರಿಗೆ ಈ ದಿನ ಶುಭ ದಿನವಾಗಿದೆ. ಕಚೇರಿ ಕೆಲಸದಲ್ಲಿ ಬಡ್ತಿ ಭಾಗ್ಯವಿದೆ. ಹೊಸ ಕಚೇರಿ ವಾತಾವರಣಕ್ಕೆ ಹೊಂದಿಕೊಳ್ಳಲಿದ್ದೀರಿ. ವಿದ್ಯಾರ್ಥಿಗಳು ಅಂದುಕೊಂಡ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸಲಿದ್ದಾರೆ.

ತುಲಾ : ಸಾರ್ವಜನಿಕ ಸ್ಥಳಗಳಲ್ಲಿ ಮಾತನಾಡುವ ಮುನ್ನ ನಾಲಿಗೆ ಮೇಲೆ ಹಿಡಿತವಿರಲಿ. ಇಲ್ಲವಾದಲ್ಲಿ ನೀವೇ ಪೇಚಿಗೆ ಸಿಲುಕಲಿದ್ದೀರಿ. ಪುರೋಹಿತರಿಗೆ ಇದು ಒಳ್ಳೆಯ ದಿನವಾಗಿದೆ. ಹಿರಿಯರು ತೀರ್ಥಯಾತ್ರೆಗೆ ತೆರಳಲಿದ್ದಾರೆ.

ವೃಶ್ಚಿಕ : ನಿಮ್ಮ ಉದ್ಯಮದಲ್ಲಿ ತಂದೆಯು ಮಹತ್ವದ ಪಾತ್ರ ವಹಿಸಲಿದ್ದಾರೆ. ಅನೇಕ ಅನಿರೀಕ್ಷಿತ ಘಟನೆಗಳು ನಿಮ್ಮ ಮನೆಯಲ್ಲಿ ಜರುಗಲಿದೆ. ವಕೀಲರಿಗೆ ಈ ದಿನ ಹೆಚ್ಚು ಶುಭಕಾರಿಯಾಗಿದೆ. ಹೆಚ್ಚೆಚ್ಚು ಅವಕಾಶಗಳು ನಿಮ್ಮನ್ನು ಹುಡುಕಿ ಬರಲಿದೆ.

ಧನು : ಈ ದಿನ ನಿಮಗೆ ಮಿಶ್ರ ಫಲಿತಾಂಶ ನೀಡಲಿದೆ. ಜವಳಿ ಉದ್ಯಮಿಗಳು, ಹಣ್ಣು ತರಕಾರಿ ವ್ಯಾಪಾರಿಗಳಿಗೆ ಈ ದಿನ ಲಾಭ ತಂದುಕೊಡಲಿದೆ. ಫ್ಲೈವುಡ್​ ಹಾಗೂ ಎಲೆಕ್ಟ್ರಾನಿಕ್​ ವಸ್ತು ಮಾರಾಟಗಾರರಿಗೆ ಈ ದಿನ ಯೋಗ್ಯವಾಗಿಲ್ಲ.

ಮಕರ : ವೈದ್ಯಕೀಯ ವೃತ್ತಿಯಲ್ಲಿ ಇರುವವರಿಗೆ ವಿದೇಶ ಪ್ರಯಾಣ ಯೋಗ ಹುಡುಕಿಕೊಂಡು ಬರಲಿದೆ. ವಿಮಾ ವ್ಯವಹಾರಗಳಲ್ಲಿ ಲಾಭ ಕಂಡುಕೊಳ್ಳಲಿದ್ದೀರಿ. ಕಲಾವಿದರಿಗೆ ಈ ದಿನ ಹೊಸ ಅವಕಾಶಗಳು ಸಿಗಲಿದೆ. ವಿದ್ಯಾರ್ಥಿಗಳಿಗೆ ಲಾಭವಿದೆ.

ಕುಂಭ : ಇಂದು ನೀವು ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ ಸಾಧಿಸಲಿದ್ದೀರಿ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಕೆಲಸದ ಸ್ಥಳವು ನೆಮ್ಮದಿಯಿಂದ ಕೂಡಿರಲಿದೆ. ಖರ್ಚುಗಳ ಮೇಲೆ ನಿಯಂತ್ರಣವಿರಲಿ. ಮಕ್ಕಳ ಆರೋಗ್ಯದ ಕಡೆಗೆ ಜಾಗ್ರತೆ ವಹಿಸಿ.

ಮೀನ : ಪುತ್ರನ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಇದರಿಂದ ಮನೆಯಲ್ಲಿ ಆತಂಕ ಎದುರಾಗಲಿದೆ. ಕುಟುಂಬಸ್ಥರ ಜೊತೆಯಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ತೆರಳಲಿದ್ದೀರಿ. ಹೊಸ ಹೂಡಿಕೆಯು ಲಾಭವನ್ನು ತಂದುಕೊಡಲಿದೆ. ಹಿರಿಯ ಸಹೋದರರು ನಿಮ್ಮ ಆರ್ಥಿಕ ಸಂಕಷ್ಟಕ್ಕೆ ನೆರವಾಗಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...